News Karnataka Kannada
Wednesday, May 08 2024
ಮಂಗಳೂರು

ಕನ್ಯಾಡಿ: ಜು.3ರಿಂದ ಆ.31ರವರೆಗೆ ಚಾತುರ್ಮಾಸ್ಯ ಕಾರ್ಯಕ್ರಮ

Kanyadi: Chaturmasya programme from July 3 to August 31
Photo Credit : News Kannada

ಕನ್ಯಾಡಿ: “ಲೋಕಕಲ್ಯಾಣ ಆತ್ಮೋನ್ನತಿಗಾಗಿ ಶ್ರೀ ಗುರುದೇವ ಮಠದಲ್ಲಿ ಜು. 3 ರಿಂದ ಆ.31 ರವರೆಗೆ 60 ದಿನಗಳ ಕಾಲ ಚಾತುರ್ಮಾಸ್ಯ ಕಾರ್ಯಕ್ರಮ ನಡೆಯಲಿದೆ” ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಅವರು ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಚಾತುರ್ಮಾಸ್ಯದ ಅಂಗವಾಗಿ
ಜು.2ರಂದು ಸಂಜೆ ವ್ರತ ವಿಧಿವಿಧಾನ, ಸುದರ್ಶನ ಹೋಮ ಜು.3ರಂದು ಬೆಳಿಗ್ಗೆ ರಾಮ ತಾರಕ ಯಜ್ಞ, ಶ್ರೀ ರಾಮ ಕ್ಷೇತ್ರದ ಪರಿವಾರ ದೇವರುಗಳಿಗೆ ವಿಶೇಷ ಪೂಜೆ,ಪುರ ಪ್ರವೇಶ, ಬೆಳಿಗ್ಗೆ 11ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮೀನುಗಾರಿಕೆ ಸಚಿವ ಮಂಕಾಳ್ ಎಸ್.ವೈದ್ಯ ಉದ್ಘಾಟಿಸಲಿದ್ದು ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ. ದಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,ವಿವಿಧ ವಿಧಾನಸಭಾ ಕ್ಷೇತ್ರಗಳ ಶಾಸಕರು, ಮಾಜಿ ಸಚಿವರು,ಮಾಜಿ ಶಾಸಕರು ಭಾಗವಹಿಸಲಿದ್ದಾರೆ.

ಪ್ರತಿದಿನ ಸಾಯಂಕಾಲ 6ರಿಂದ ಸಂಪೂರ್ಣ ರಾಮಾಯಣ ದರ್ಶನಂ, ಶ್ರೀಮದ್ ಭಾಗವತ ಸಪ್ತಾಹ, ಮಹಾಭಾರತ ಕಥಾ ಪ್ರವಚನ,ತಾಳಮದ್ದಳೆ, ಹರಿಕಥೆ ಭಕ್ತಿ ರಸಮಂಜರಿ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.

-ಮೌನ ಚಾತುರ್ಮಾಸ್ಯ-
ಈ ಬಾರಿಯ ಚಾತುರ್ಮಾಸ್ಯವನ್ನು ಮೌನ ಚಾತುರ್ಮಾಸ್ಯವಾಗಿ ಆಚರಿಸಲಿದ್ದು ಈ ಅವಧಿಯಲ್ಲಿ ಬರುವ 8 ಭಾನುವಾರಗಳನ್ನು ಹೊರತುಪಡಿಸಿ ಇತರ ದಿನಗಳಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಸ್ವಾಮೀಜಿಗಳ ದರ್ಶನ ಇರುವುದಿಲ್ಲ. ಭಾನುವಾರಗಳಂದು ಮಾತ್ರ ಸ್ವಾಮೀಜಿಗಳು ಪೂರ್ತಿ ದಿನ ಭಕ್ತಾದಿಗಳಿಗೆ ದರ್ಶನವನ್ನು ನೀಡಲಿರುವರು.

-ಸಮಾಲೋಚನೆ ಸಭೆ-
ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಚಾತುರ್ಮಾಸ್ಯದ ಕುರಿತು ಸಮಾಲೋಚನೆ ಸಭೆ ಜರಗಿತು. ಪ್ರಮುಖರಾದ ಭಗೀರಥ ಜಿ., ಶೈಲೇಶ್ ಕುಮಾರ್, ಕೇಶವ ಬೆಳಾಲು,ಭಾಸ್ಕರ ಧರ್ಮಸ್ಥಳ, ಅಭಿನಂದನ್ ಹರೀಶ್ ಕುಮಾರ್,ಚಂದನ್ ಕಾಮತ್,ಶ್ರೀನಿವಾಸರಾವ್, ಕೃಷ್ಣಪ್ಪ ಗುಡಿಗಾರ್,ಅಣ್ಣಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟಿ ತುಕಾರಾಮ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.

ಚಾತುರ್ಮಾಸ್ಯ: ಸಮಾಜಕ್ಕೆ ಸಂದೇಶ
“ಜನಕಲ್ಯಾಣ ಲೋಕ ಸುಭಿಕ್ಷಕ್ಕೋಸ್ಕರ ಚಾತುರ್ಮಾಸ್ಯ ನಡೆಯುತ್ತದೆ. ಆಧ್ಯಾತ್ಮಿಕ,ಧಾರ್ಮಿಕ ಮೌಲ್ಯಗಳು ಜನರಿಗೆ ಉತ್ತಮ ಸಂದೇಶವನ್ನು ನೀಡುತ್ತವೆ. ಕಾನೂನು ಸಂವಿಧಾನಗಳಿಗೆ ಗೌರವ ನೀಡಿ ಸಂಸ್ಕಾರದ ನಡವಳಿಕೆಯಿಂದ ಸತ್ಪ್ರಜೆಗಳಾಗಿ ಬಾಳಿದಾಗ ಲೋಕಕಲ್ಯಾಣವಾಗುತ್ತದೆ. ಧಾರ್ಮಿಕ ಭಕ್ತಿಯ ಮೌಲ್ಯಗಳನ್ನು ಜನರಲ್ಲಿ ಮೂಡಿಸಲು ಚಾತುರ್ಮಾಸ್ಯ ಪೂರಕವಾಗಿದ್ದು ಈ ಬಾರಿ ಮೌನ ಚಾತುರ್ಮಾಸ್ಯಕ್ಕೆ ಪ್ರಾಧ್ಯಾನತೆ ನೀಡಲಾಗಿದೆ” ಎಂದು ಸ್ವಾಮೀಜಿ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು