News Karnataka Kannada
Monday, April 29 2024
ಮಂಗಳೂರು

ಕಾಂತಾರ ಎಫೆಕ್ಟ್, ದೈವಾರಾಧನೆ ವೀಕ್ಷಣೆಗೆ ಟಿಕೆಟ್: ಸಿಡಿದೆದ್ದ ದೈವಾರಾಧಕರು

ತುಳುನಾಡಿನ ದೈವ ನರ್ತನ ವೀಕ್ಷಣೆಗೆ ಟ್ರಾವೆಲ್ ಪ್ಯಾಕೇಜ್ ಗೆ ಟ್ರಾವೆಲ್ ಏಜೆಂನ್ಸಿ ಪ್ರಕಟಿಸಿದ್ದಾರೆ.
Photo Credit : News Kannada

ಮಂಗಳೂರು:  ತುಳುನಾಡಿನ ದೈವ ನರ್ತನ ವೀಕ್ಷಣೆಗೆ ಟ್ರಾವೆಲ್ ಪ್ಯಾಕೇಜ್ ಗೆ ಟ್ರಾವೆಲ್ ಏಜೆಂನ್ಸಿ ಪ್ರಕಟಿಸಿದ್ದಾರೆ. ಈ ಟೂರ್ ಪ್ಯಾಕೇಜ್ ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ತುಳುನಾಡಿನ ದೈವಾರಾಧನೆಯನ್ನ ವ್ಯವಹಾರದ ಸರಕಾಗಿ ಬಳಕೆ ಮಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಟ್ರಾವೆಲ್ ಏಜೆನ್ಸಿಯೊಂದು ಹರಿಬಿಟ್ಟ ಪೋಸ್ಟರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. beatravelbuddy ಎಂಬ ಏಜೆಂನ್ಸಿಯಿಂದ ಪೋಸ್ಟ್ ಮಾಡಿದ್ದಾರೆ

ದೈವಾರಾಧನೆ ಸಹಿತ ಕರಾವಳಿಯ ಸಂಸ್ಕೃತಿ, ಪ್ರವಾಸಿತಾಣಗಳನ್ನ ತೋರಿಸಲಾಗುವುದು. ದೈವದ ಚಿತ್ರವಿರುವ ಪೋಸ್ಟರ್ ನಲ್ಲಿ ಟಿಕೆಟ್ ನ ದರವನ್ನು ಉಲ್ಲೇಖ ಮಾಡಿದ್ದಾರೆ.

2899 ಕೊಟ್ಟರೆ ಕರಾವಳಿಯ ಸೊಗಡು ಹಾಗು ದೈವಾರಾಧನೆಯನ್ನ ತೋರಿಸಲಾಗುವುದು ಎಂದು ಪೋಸ್ಟ್ ಮಾಡಿದ್ದಾರೆ. ತುಳುನಾಡಿನಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯುವ ದೈವಾದಾಧನೆ ತೋರಿಸಲಾಗುವುದು ಪೋಸ್ಟರ್ ವಿರುದ್ಧ ದೈವಾರಾಧಕರು ಸಿಡಿದೆದ್ದಿದ್ದಾರೆ.

ದೈವಾರಾಧನೆಗೆ ಟಿಕೆಟ್ ನಿಗದಿಪಡಿಸಿ ವ್ಯವಹಾರಕ್ಕಾಗಿ ಬಳಸಿದ್ದಾರೆ. ಕಾಂತಾರ ಸಿನಿಮಾ ಬಂದ ಮೇಲೇ ಈ ರೀತಿಯ ಅವಾಂತರಗಳಾಗುತ್ತಿದೆ.ರಿಷಬ್ ಶೆಟ್ಟಿಯವರು ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಜಾಗೃತಿ ಮೂಡಿಸಬೇಕು.ಇಲ್ಲವಾದಲ್ಲಿ ಇದರ ವಿರುದ್ಧ ನಾವೇ ಹೋರಾಡುತ್ತೇವೆ.

ಯಾವುದೇ ಕಾರಣಕ್ಕೂ ಈ ರೀತಿಯ ಘಟನೆಗಳಿಗೆ ಅವಕಾಶ ನೀಡುವುದಿಲ್ಲ. ಹಾದಿ ಬೀದಿಗಳಲ್ಲಿ ದೈವರಾಧನೆ ಪ್ರದರ್ಶನವಾಗುತ್ತಿದೆ.ಇದು ಇನ್ನೊಂದು ಹಂತ ತಲುಪಿ ವ್ಯವಹಾರದ ಸರಕಾಗಿ ಉಪಯೋಗಿಸಲಾಗುತ್ತಿದೆ.ದೈವಾರಾಧಕರು ಒಗ್ಗಟ್ಟಾಗಿ ಇದರ ವಿರುದ್ಧ ಹೋರಾಡಬೇಕು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು