ಕಡಬ: ತಾಲೂಕು ಪಂಚಾಯತ್ ಬಳಿಯ ರಸ್ತೆ ಮತ್ತು ಪಟ್ಟಣ ಪಂಚಾಯತ್ ಬಳಿಯ ಕುಡಿಯುವ ನೀರಿನ ಸಮಸ್ಯೆಯ ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿದರು. ಸ್ಥಳೀಯರಿಂದ ಸಮಸ್ಯೆಯ ಮಾಹಿತಿಯನ್ನು ಪಡೆದುಕೊಂಡು ಸ್ಥಳವನ್ನು ವೀಕ್ಷಿಸಿದರು. ಅದಷ್ಟು ಶೀಘ್ರದಲ್ಲಿ ಕಾಮಗಾರಿ ಮುಗಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಹರೀಶ್ ಕಂಜಿಪಿಲಿ, ರಾಕೇಶ್ ರೈ ಕೆಡೆಂಜಿ, ಕೃಷ್ಣ ಶೆಟ್ಟಿ ಕಡಬ, ಪಿ ವೈ ಕುಸುಮಾ, ಕೃಷ್ಣ ಎಂ ಆರ್, ಪುಲಾಸ್ಯ ರೈ, ಶಿವಪ್ರಸಾದ್ ಮೈಲೇರಿ, ಆದಂ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.