News Karnataka Kannada
Tuesday, May 07 2024
ಮಂಗಳೂರು

ಪ್ರತಿಷ್ಠಿತ ಜೆಸಿಐ ಮಂಗಳೂರು ಸಾಮ್ರಾಟ್ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ಆಯ್ಕೆ

JCI Mangalore Samrat elected president and secretary
Photo Credit : News Kannada

ಮಂಗಳೂರು: ವಲಯ xv ರ ಪ್ರತಿಷ್ಠಿತ ಘಟಕ ಜೆಸಿಐ ಮಂಗಳೂರು ಸಾಮ್ರಾಟ್ ಅಧ್ಯಕ್ಷರಾಗಿ ಜೆಸಿ ಅನುಶ್ಚಂದ್ರ ಹಾಗೂ ಕಾರ್ಯದರ್ಶಿಯಾಗಿ ಜೆಸಿ ವಿಜೇಶ್ ಶೆಟ್ಟಿ ಇವರನ್ನು ಘಟಕದ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಜೆಸಿ ಅನುಶ್ಚಂದ್ರ ಇವರು ಸುಮಾರು 8 ವರ್ಷಗಳಿಂದ ಜೇಸೀ ಆಂದೋಲನದಲ್ಲಿ ಸಕ್ರಿಯ ಸದಸ್ಯರಾಗಿ ಹಲವಾರು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು, ಘಟಕದ ಕಾರ್ಯದರ್ಶಿಯಾಗಿ ತನ್ನ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ವಿಶೇಷ ಪರಿಣತಿಯನ್ನು ಹೊಂದಿರುವ ಇವರು ವಿಡಿಯೋ ಪ್ರೊಡಕ್ಷನ್ ನಲ್ಲಿ 12 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅತ್ಯುತ್ತಮ ಸಂವಹನ ಕಲೆ ಹೊಂದಿರುವ ಇವರು ಬಿಎನ್ ಐ ಆದಿ, ಮಂಗಳೂರು ಇದರ ಸದಸ್ಯರು.

ಜೆಸಿ ವಿಜೇಶ್ ಶೆಟ್ಟಿ ಮಂಗಳೂರು ಎಮ್ ಎಸ್ ಇ ಝೆಡ್ ಉದ್ಯೋಗಿಯಾಗಿದ್ದು, ಜೇಸೀ ಆಂದೋಲನದಲ್ಲಿ ಸುಮಾರು ಎಂಟು ವರ್ಷಗಳ ಅನುಭವ ಹೊಂದಿದ್ದಾರೆ. ಘಟಕದ ಸಕ್ರಿಯ ಸದಸ್ಯರಾಗಿ ಹಲವಾರು ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ, ಪ್ರಸ್ತುತ ಘಟಕದ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು