ಬಂಟ್ವಾಳ: ಶಾಂತಿಯ ಬಂಟ್ವಾಳ ಸ್ಥಾಪನೆಗೆ ಸಹಕಾರ ನೀಡಿದ ಕ್ಷೇತ್ರದ ಜನತೆ ಮತ್ತೆ ಈ ಬಾರಿಯೂ ಬಿಜೆಪಿಗೆ ಬೆಂಬಲ ನೀಡಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಶಾಸಕ ರಾಜೇಶ್ ನಾಯ್ಕ್ ವಿಶ್ವಾಸ ವ್ಯಕ್ತಪಡಿಸಿದರು.
ಕುರಿಯಾಳ ಶಕ್ತಿ ಕೇಂದ್ರದ ವೇದಾನಂದ ಕಾರಂತ ಅವರ ಮನೆಯಲ್ಲಿ ಪ್ರಮುಖ ಕಾರ್ಯಕರ್ತರ ಮನೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಸಾವಿರಾರು ಕೋಟಿ ರೂ ಅಭಿವೃದ್ಧಿ ಜೊತೆಗೆ ಶಾಂತಿ ನೆಮ್ಮದಿಯ ಬಂಟ್ವಾಳಕ್ಕೆ ಮತ್ತೊಮ್ಮೆ ಆದ್ಯತೆ ನೀಡುತ್ತೀರಿ ಎಂಬ ಭರವಸೆ ಇದೆ.
ಕ್ಷೇತ್ರದಲ್ಲಿ ಆಗಬೇಕಾಗಿರುವ ಪ್ರತಿ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕನಾಗಿ ಆಯ್ಕೆಯಾದ ಬಳಿಕ ಪ್ರಥಮ ಆದ್ಯತೆಯಲ್ಲಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಶಕ್ತಿ ಕೇಂದ್ರದ ಪ್ರಮುಖ್ ರೂಪೇಶ್ , ಬೂತ್ ಅದ್ಯಕ್ಷರುಗಳಾದ ಪ್ರದೀಪ್ ಮಾರ್ಲ,ಸುರೇಂದ್ರ ಶೆಟ್ಟಿ ಪಾಪೆದಡ್ಕ, ಸಂಚಾಲಕ ಹರೀಶ್ ಶೆಟ್ಟಿ ಪಡು, ಪ್ರಕೋಷ್ಟದ ಸಂಚಾಲಕ ವೇದಾನಂದ ಕಾರಂತ, ಅಮ್ಟಾಡಿ ಶಕ್ತಿ ಕೇಂದ್ರದ ಉಸ್ತುವಾರಿ ಪ್ರಕಾಶ್ ಬೆಳ್ಳೂರು, ಗ್ರಾಮಪಂಚಾಯತ್ ಸತತ ಸದಸ್ಯರುಗಳಾದ ಯಶೋಧ, ಆಶ್ವಿನಿ ಶೆಟ್ಟಿ, ಶ್ರೀದೇವಿ, ಸುಹಾಸಿನಿ ಮತ್ತಿತರರು ಉಪಸ್ಥಿತರಿದ್ದರು.