News Karnataka Kannada
Thursday, May 02 2024
ಮಂಗಳೂರು

ಬಂಟ್ವಾಳ: ಅಂತಿಮ ಹಂತಕ್ಕೆ ತಲುಪಿದ ಬಿಸಿರೋಡು ಸೌಂದರ್ಯೀಕರಣದ ಕಾಮಗಾರಿ

Bantwal: Work on beautification of Bc Road reaches final stage
Photo Credit : By Author

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಕನಸಿನ ಯೋಜನೆಯಾಗಿರುವ ಬಿಸಿರೋಡು ಸೌಂದರ್ಯೀಕರಣದ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ.

ಬಿಸಿರೋಡಿಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಬಿಸಿರೋಡು ಪೇಟೆಯನ್ನು ಸೌಂದರ್ಯಯುತವಾಗಿ ಮಾಡಬೇಕು ಎಂಬ ‌ನಿಟ್ಟಿನಲ್ಲಿ ಸೌಂದರೀಕರಣದ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದರು.
ಬೇರೆ ಬೇರೆ ಅನುದಾನದ ಜೊತೆ ಶಾಸಕರ ಅನುದಾನ ಹಾಗೂ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಅನುದಾನವನ್ನು ಬಳಸಿಕೊಂಡು ಬಿಸಿರೋಡಿನ ಸುಂದರೀಕರಣ ಯೋಜನೆಗೆ ಶಿಲಾನ್ಯಾಸ ನಡೆಸಲಾಗಿತ್ತು.

ಅದರಂತೆ ಬಹುಮುಖ್ಯವಾಗಿ ಬಿಸಿರೋಡಿನ ಹೃದಯಭಾಗ ಕೆಸರು ಹಾಗೂ ದೂಳಿನಿಂದ ಮುಳುಗಡೆಯಾಗಿತ್ತು. ಇದರಿಂದ ಮುಕ್ತಗೊಳಿಸಬೇಕು ಎಂಬ ನಿಟ್ಟಿನಲ್ಲಿ ಬಿಸಿರೋಡಿನ ಸುತ್ತಮುತ್ತ ಹಾಗೂ ಪೈ ಓವರ್ ನ ಅಡಿಭಾಗದಲ್ಲಿ ಇಂಟರ್ ಲಾಕ್ ಅಳವಡಿಸಲಾಗಿದೆ.

ಇದರ ಬಿಸಿರೋಡಿನ ಅನ್ನಪೂರ್ಣೇಶ್ವರಿ ದೇವಾಲಯದ ವರೆಗೆ ಕೈಕುಂಜೆ ರಸ್ತೆಯ ಕಾಂಕ್ರೀಟ್ ಕರಣ ಮಾಡಿ ರಸ್ತೆಯ ಮಧ್ಯ ಭಾಗದಲ್ಲಿ ಬೀದಿ ದೀಪಗಳನ್ನು ಹಾಕಲಾಗಿದೆ.

ರಸ್ತೆಯಲ್ಲಿ ನೀರು ನಿಂತು ಜನರಿಗೆ ತೊಂದರೆಯಾಗದಂತೆ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ವ್ಯವಸ್ಥೆ ನಿರ್ಮಿಸಲಾಗಿದೆ. ಬಿಸಿರೋಡಿಗೆ ಬರುವ ಸಾರ್ವಜನಿಕರಿಗಾಗಿ ಹೈಟೆಕ್ ಮಾದರಿಯ ಟಾಯ್ಲೆಟ್ ಕಾಮಗಾರಿ ಅಂತಿಮ ಹಂತದಲ್ಲಿ ಇದೆ.

ಬಿಸಿರೋಡಿಗೆ ಪ್ರವೇಶ ಮಾಡುವಲ್ಲಿ ನಿರ್ಮಾಣ ಗೊಂಡಿರುವ ಪ್ಲೈ ಓವರ್ ನ ಬಣ್ಣ ಕಳೆದುಕೊಂಡು ಅತ್ಯಂತ ಕೆಟ್ಟ ಸ್ಥಿತಿಯನ್ನು ತಲುಪಿತ್ತು. ಅ ಕಾರಣಕ್ಕಾಗಿ ಸಂಪೂರ್ಣ ವಾಗಿ ಶುಚಿಗೊಳಿಸಿ ಪೈಟಿಂಗ್ ಮಾಡಲಾಗಿದೆ. ಪಿಲ್ಲರ್ ಹಾಗೂ ಪ್ಲೈ ಓವರ್ ಗೆ ಸಂಪೂರ್ಣ ವಾಗಿ ಫೈಟಿಂಗ್ ಮಾಡಲಾಗಿದೆ.

‌ಆದರೆ ಕೇವಲ ಫೈಟಿಂಗ್ ಮಾಡಿದರೆ ಸಾಲದು ಅದರಲ್ಲಿರುವ ಸುಮಾರು 22 ಪಿಲ್ಲರ್ ಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಕಲಾಕೃತಿಗಳ ನಿರ್ಮಾಣಕ್ಕೆ ಮಂಜೇಶ್ವರದ ಕಲಾವಿದರು ಇದೀಗ ಮುಂದಾಗಿದ್ದು, ನಿರೀಕ್ಷೆಯಂತೆ ಕಾರ್ಯ ನಡೆದರೆ ಜನವರಿ ಅಂತ್ಯಕ್ಕೆ ಬಿಸಿರೋಡು ಹೊಸರೂಪ ಪಡೆಯುವುದರಲ್ಲಿ ಸಂಶಯವಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು