ಬಂಟ್ವಾಳ: ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಮಂಗಳವಾರ ರಾತ್ರಿಯಿಂದ ತಾಲೂಕಿನ ಹಲವು ಕಡೆಗಳಲ್ಲಿ ಮಳೆಹಾನಿ ಸಂಭವಿಸಿದೆ.
ಕನ್ಯಾನ ಗ್ರಾಮದ ಕರ್ಮಿನಾಡಿ ಎಂಬಲ್ಲಿ ವಸಂತಿ ಎಂಬವರ ಮನೆಗೆ ಮರಬಿದ್ದು ಭಾಗಶಃ ಹಾನಿಯಾಗಿದೆ. ವೀರಕಂಭ ಗ್ರಾಮದ ಮಜ್ಜೋನಿ ಎಂಬಲ್ಲಿ ನೆಬಿಸ ರವರ ಮನೆ ಮೇಲೆ ಮರಬಿದ್ದು ಹಾನಿಯಾಗಿದೆ, ವೀರಕಂಭ ಗ್ರಾಮದ ಮಜಿ ಎಂಬಲ್ಲಿ ಬೇಬಿ ಎಂಬವರ ಮನೆಯ ಆವರಣ ಗೋಡೆಗೆ ಹಾನಿಯಾಗಿದೆ, ಕೊಳ್ನಾಡು ಗ್ರಾಮದ ಅಲ್ಲಿಕಂಡೆ ಎಂಬಲ್ಲಿ ರಫೀಕ್ ರವರ ಮನೆಯ ಮೇಲೆ ಗುಡ್ಡ ಜರಿದು ಹಾನಿ ಸಂಭವಿಸಿದೆ, ತೆಂಕಕಜೆಕಾರು ಗ್ರಾಮದ ಶೀಲಾವತಿ ಎಂಬವರ ಮನೆಗೆ ತೀವ್ರ ಹಾನಿಯಾಗಿದೆ, ಮಂಚಿ ಗ್ರಾಮದ ಹೆಗಡೆಗುಳಿ ಎಂಬಲ್ಲಿ ಆಲಿಮಮ್ಮ ಎಂಬವರ ಮನೆ ಜರಿದು ಮನೆ ಕುಸಿಯುವ ಭೀತಿ ಎದುರಾಗಿದೆ, ಮಾಣಿ ಗ್ರಾಮದ ಕೊಡಾಜೆಯಲ್ಲಿ ಇಸ್ಮಾಯಿಲ್ ಎಂಬವರ ಮನೆಯ ಮುಂಭಾಗದ ಮರ ಬಿದ್ದು ವಾಹನಕ್ಕೆ ಸಂಪೂರ್ಣ ಹಾನಿ ಸಂಭವಿಸಿದೆ, ಪಳಿಕೆ ನಿವಾಸಿ ಮೋಹನ್ ಕುಲಾಲ್ ರವರ ಹಂಚಿನ ಮನೆಗೆ ಮರಬಿದ್ದು ಹಾನಿಯಾಗಿದೆ, ಪಿಲಾತಬೆಟ್ಟು ಗ್ರಾಮದ ಮಂಚಗುಡ್ಡೆ ಎಂಬಲ್ಲಿ ಗೋಪಿ ಎಂಬವರ ಮನೆಗೆ ಹಾನಿಯಾಗಿದೆ. ಸ್ಥಳಕ್ಕೆ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ತುಂಗಪ್ಪ ಬಂಗೇರ ಭೇಟಿ ನೀಡಿದರು.
ವೀರಕಂಭ ಗ್ರಾಮದ ಬೆತ್ತಸರವು ಎಂಬಲ್ಲಿ ದನದ ಕೊಟ್ಟಿಗೆಗೆ ಹಾನಿಯಾಗಿದೆ, ಅನಂತಾಡಿ ಗ್ರಾಮದ ರೋಹಿಣಿ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ.