ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದ ವತಿಯಿಂದ ಜುಲೈ 26 ಕಾರ್ಗಿಲ್ ವಿಜಯ ದಿವಸದ ಆಚರಣೆಯ ಭಾಗವಾಗಿ ಅಲ್ಲಿನ ಕೇಂದ್ರೀಯ ಕೈಗಾರಿಕಾ ದಳದ ಏವಿಯೇಷನ್ ಸೆಕ್ಯುರಿಟಿ ಗ್ರೂಪಿಗೆ ಬುಲೆಟ್ ನಿರೋಧಕ ವಾಹನವನ್ನು ಕೊಡುಗೆಯಾಗಿ ನೀಡಿದೆ.
ಈ ಕ್ರಮವನ್ನು ಶ್ಲಾಘಿಸಿದ ಚೆನ್ನೈ ಸಿಐ ಎಸ್ ಎಫ್ ಡಿಜಿ ಐ ಏರ್ ಪೋರ್ಟ್ ಸೇತುರಾಮನ್ ಸೆಲ್ವಂ ಅವರು ಬುಲೆಟ್ ನಿರೋಧಕ ವಾಹನ ನೀಡುವುದರಿಂದ ಇದೊಂದು ಚರಿತ್ರಾರ್ಹ ದಿನವಾಗುತ್ತದೆ ತಮ್ಮ ಕರ್ತವ್ಯದ ವೇಳೆ ಮತ್ತಷ್ಟು ಧೈರ್ಯ ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸಲು ಇದು ನೆರವಾಗಲಿದೆ ಎಂದರು .ಅತೀ ಸೂಕ್ಷ್ಮವಲ್ಲದ ವಿಮಾನ ನಿಲ್ದಾಣಗಳಲ್ಲಿ ಮಂಗಳೂರಿಗೆ ಮೊದಲ ಬಾರಿಗೆ ವಾಹನವನ್ನು ನೀಡಲಾಗುತ್ತಿದೆ ಮುಂಬಯಿ ಬೆಂಗಳೂರು ದಿಲ್ಲಿ ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ಇಂಥ ವಾಹನಗಳಿವೆ.
ಮಂಗಳೂರು ವಿಮಾನ ನಿಲ್ದಾಣ ತನ್ನೆಲ್ಲಾ ಅಗತ್ಯವಿರುವ ಸೆಕ್ಯುರಿಟಿ ಮಾನದಂಡಗಳನ್ನು ಪೂರೈಸುತ್ತಿದೆ ಅದರಂತೆ ಸಿ ಐ ಎಸ್ ಎಫ್ ನ ಎಎಸ್ ಜಿ ಅವರಿಗೆ ಆದ್ಯತೆ ನೀಡುವ ಮೂಲಕ ಅವರ ನೈತಿಕ ಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದ್ದೇವೆ ಲೈಟ್ ಮಷಿನ್ ಗನ್ ಮೌಂಟ್ ಮಾಡಲಾದ ಈ ವಾಹನವು ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಿದೆ ಎಂದು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.