ಮಂಗಳೂರು: ಬಾಲ್ಯದಲ್ಲೇ ಮಕ್ಕಳಿಗೆ ಕನ್ನಡಕ ಬರುತ್ತಿದೆ ಆದುದರಿಂದ ಮಕ್ಕಳ ಕಣ್ಣಿನ ಆರೈಕೆ ಪ್ರಾಥಮಿಕ ಹಂತದಲ್ಲೇ ನಡೆಯಬೇಕು ಎಂದು
ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಹಿರಿಯ ಪ್ರಬಂಧಕ ಬಿ. ಪ್ರಕಾಶ್ ಪೈ. ಹೇಳಿದರು.
ಅವರು ಸ್ವಸ್ತಿಕ್ ಕಲಾ ಕೇಂದ್ರ, ಜಲ್ಲಿ ಗುಡ್ಡೆ ಇವರು ಆಯೋಜಿಸಿದ, ಇಂದು ಜಿ.ಪಂ.ಹಿ.ಪ್ರಾ.ಶಾಲೆ ಬಜಾಲ್ ನಂತೂರು ಶಾಲೆಯಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ಮೀನು ಮೊಟ್ಟೆ ಬಾದಾಮಿ, ಕ್ಯಾರೆಟ್ ಹಾಗೂ ಕೇಲ್ ನಂತಹ ಆಹಾರ ಪದಾರ್ಥಗಳಲ್ಲಿ ಸಿಗುವ ವಿಟಮಿನ್ ಎ ಯಿಂದ ಕಣ್ಣಿನ ಒತ್ತಡದ ಸಮತೋಲನವನ್ನು ಸರಿದೂಗಿಸಬಹುದು ಎಂದು ಅಧ್ಯಕ್ಷ ಕೆ.ಸಿ. ಹರಿಶ್ಚಂದ್ರ ರಾವ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿ ಗಳಾಗಿ ಮ.ನ.ಪಾ. ಸದಸ್ಯ ಶ್ರೀ ಆಶ್ರಫ್ ಶುಭ ಹಾರೈಸಿದರು.
ದೀಪ ಪ್ರಜ್ವಲನ ಗೊಳಿಸಿ ಮಾತನಾಡಿದ ಎಸ್.ಡಿ ಎಂ.ಸಿ. ಅಧ್ಯಕ್ಷರಾದ ಮಹಮ್ಮದ್ ಮುಸ್ತಾಫ, ಕಲಾ ಕೇಂದ್ರದ ಮೂಲಕ ಅರು ಶಾಲೆಗಳಲ್ಲಿ ನಡೆಯುವ ನೇತ್ರ ತಪಾಸಣೆ ಶಿಬಿರದ ಕಾರ್ಯ ಶ್ಲಾಘನೀಯ ಎಂದರು. ಸ್ವಸ್ತಿಕ್ ಕಲಾಕೇಂದ್ರ ಜಲ್ಲಿಗುಡ್ಡೆ ಹಾಗೂ ನ್ಯೂ ಸ್ ಕರ್ನಾಟಕ ಮಂಗಳೂರು ಹಾಗೂ ಎ.ಜೆ . ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ನಡೆಸಲಾದ ನೇತ್ರ ತಪಾಸಣಾ ಶಿಬಿರದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಗ್ಲಾಡಿಸ್ ಡಿ’ಸೋಜಾ ಗಂಗಾಧರ್ ರಾವ್, ಶೋಭಾಹರೀಶ್ ಅಲ್ಲದೆ ಎ.ಜೆ. ಆಸ್ಪತ್ರೆಯ ಡಾ! ವೈಷ್ಣ ಉಪಸ್ಥಿತರಿದ್ದರು.
ಎಂಬತ್ತಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳಿಗೆ ಕಣ್ಣು ತಪಾಸಣೆ ನಡೆಸಲಾಯಿತು. ಹತ್ತು ಮಂದಿಗೆ ಹೆಚ್ಚಿನ ಚಿಕಿತ್ಸೆ ಗಾಗಿ ಆಸ್ಪತ್ರೆಯ ಕೆಂಪು ಕಾರ್ಡ್ ನೀಡಲಾಯಿತು.ಮಕ್ಕಳಿಗೆ ಪಂಚೇಂದ್ರಿಯಗಳ ಬಗ್ಗೆ ರಸ ಪ್ರಶ್ನೆ ನಡೆಸಿ ಬಹುಮಾನ ನೀಡಲಾಯಿತು. ಸಂಸ್ಥೆಯ ಸಂತೋಷ್ ಪಡೀಲ್ ಸ್ವಾಗತಿಸಿ , ಸುಮಲತಾ ಹರೀಶ್ ಪ್ರಸ್ತಾವನೆ ಮಂಡಿಸಿದರು. ಶಾಲಾ ಶಿಕ್ಷಕಿ ವಿಲ್ಮಾ ವಂದಿಸಿದರು. ಕೋಶಾಧಿಕಾರಿ ಆನಂದ ರಾವ್ ಕಾರ್ಯಕ್ರಮ ನಿರೂಪಿಸಿದರು.