ಮಂಗಳೂರು: ನ್ಯೂಸ್ ಕರ್ನಾಟಕ ಇದರ ಸಹಯೋಗದೊಂದಿಗೆ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು, ರೋಟರಿ ಕ್ಲಬ್ ಆಫ್ ಮಂಗಳೂರು ಹಿಲ್ಸ್ ಸೈಡ್, ಲಯನ್ಸ್ ಅಂಡ್ ಲಿಯೊ ಕ್ಲಬ್ ಆಫ್ ಮಂಗಳೂರು, ರೋಟರಿ ಕ್ಲಬ್ ಆಫ್ ಮಂಗಳೂರು ಮೆಟ್ರೋ, ಇವರ ಸಹಯೋಗದೊಂದಿಗೆ ಉಚಿತ ದಂತ ತಪಾಸಣಾ ಶಿಬಿರ ಜಿಲ್ಲಾ ಕಾರಾಗೃಹ ಕೋಡಿಯಾಲ್ ಬೈಲ್ ಮಂಗಳೂರಿನಲ್ಲಿ ಅಗಸ್ಟ್ 31ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಿತು.
ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ, ರೋಟರಿ ಕ್ಲಬ್ ಆಫ್ ಮಂಗಳೂರು ಮೆಟ್ರೋ, ಇದರ ಅಧ್ಯಕ್ಷರಾದ ರಜನಿ ಅವರು “ತಪ್ಪು ಸರಿ ಶಿಕ್ಷೆ ಎಂಬುದು ಜಗದ ನಿಯಮ, ಮಾನವನಾಗಿ ನಾವು ನಮ್ಮ ಪಾಲಿನ ಅಳಿಲು ಸೇವೆಯನ್ನು ಮಾಡಬೇಕು” ಎಂಬ ಮಾತಿನೊಂದಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸುತ್ತಾ,ರೋಟರಿ ಕ್ಲಬ್ ಆಫ್ ಮಂಗಳೂರು ಹಿಲ್ ಸೈಡ್ ಇದರ ಮಾಜಿ ಅಧ್ಯಕ್ಷರಾದ ಶಾಮ್ ಲಾಲ್ ಎರ್ಮಾಳ್, ಲಯನ್ಸ್ ಕ್ಲಬ್ ಇಂಟರ್ ನ್ಯಾಶನಲ್ ಡಿಸ್ಟ್ರಿಕ್ಟ್ 317ಡಿ ರೀಜನ್ ಚೇಯರ್ ಪರ್ಸನ್ ಆದ ಲಯನ್ ಚಂದ್ರಹಾಸ ರೈ, ಇಂತಹ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚು ನಡೆಯಲಿ ಎಂದು ಶುಭನುಡಿದರು.
ಜೈಲು ಸೂಪರಿಡೆಂಟ್ ಆದಂತಹ ಓಬಲೇಶ್ವರ್ ಅವರು “ವ್ಯಕ್ತಿತ್ವದ ಕೆಡುಕನ್ನು ದ್ವೇಷಿಸಿ ವ್ಯಕ್ತಿಯನ್ನಲ್ಲ, ಕಾರಾಗೃಹದ ಕೈದಿಗಳ ಹಿತದೃಷ್ಟಿಯಲ್ಲಿ ಇನ್ನಷ್ಟು ಕಾರ್ಯಕ್ರಮಗಳು ನಡೆಸುವ ಯೋಜನೆ ಇದ್ದಲ್ಲಿ ತನ್ನ ಸಹಕಾರ ಇದ್ದೇ ಇರುತ್ತದೆ” ಎಂದು ತಿಳಿಸಿದರು.
ಜಿಲ್ಲಾ ಕಾರಾಗೃಹದಲ್ಲಿನ ಕೈದಿಗಳಿಗೆ ಉಚಿತ ದಂತ ತಪಾಸಣೆಯನ್ನು ಕೆಎಂಸಿ ಡೆಂಟಲ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳೊಂದಿಗೆ ಡಾಕ್ಟರ್ ಅವಿನಾಶ್ ಅವರು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇವರು, “ರಕ್ಷಾ ಬಂಧನದ ಈ ಶುಭ ಸಂದರ್ಭದಲ್ಲಿ ನಮ್ಮ ರಕ್ಷಕರಾದ ಪೊಲೀಸ್ ಪೇದೆಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡದ್ದು ಅತ್ಯಂತ ಸಂತೋಷಕರ” ಎಂದು ನುಡಿದರು.
ಶ್ರೀ ಸನತ್ ಕದ್ರಿ ಇವರು ಕಾರ್ಯಕ್ರಮದಲ್ಲಿ ಸಹಕರಿಸಿದ ಸರ್ವರಿಗೆ ಸ್ವಾಗತವನ್ನು ಬಯಸಿದರು. ನ್ಯೂಸ್ ಕರ್ನಾಟಕ, ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು ಇದರ ವಿದ್ಯಾರ್ಥಿಗಳು, ರೋಟರಿ ಕ್ಲಬ್ ಆಫ್ ಮಂಗಳೂರು ಹಿಲ್ಸ್ ಸೈಡ್, ರೋಟರಿ ಕ್ಲಬ್ ಆಫ್ ಮಂಗಳೂರು ಮೆಟ್ರೋ,ಲಯನ್ಸ್ ಅಂಡ್ ಲಿಯೊ ಕ್ಲಬ್ ಆಫ್ ಮಂಗಳೂರು ಮೆಟ್ರೋ ಸಂಸ್ಥೆಗಳ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.