News Karnataka Kannada
Sunday, April 28 2024
ಮಂಗಳೂರು

ಮಂಗಳೂರು:  ಉದ್ಯಮಿ ವಿದ್ಯಾರ್ಥಿಗಳಿಗೆ ‘ಸ್ಟಾರ್ಟ್ ಅಪ್ ಮೈಂಡ್ ಸೆಟ್’ ಕಾರ್ಯಗಾರ

Start
Photo Credit : News Kannada

ಮಂಗಳೂರು: ಸ್ವಸ್ತಿಕ ನ್ಯಾಷನಲ್ ಸ್ಕೂಲ್, ಅಟಲ್ ಇನ್ಕ್ಯೂಬೇಶನ್ ಸೆಂಟರ್, ನಿಟ್ಟೆ ಮಂಗಳೂರು, ಪ್ರೊಡಕ್ಟಿವಿಟಿ ಕೌನ್ಸಿಲ್ ಮತ್ತು ರೋಟರಿ ಕ್ಲಬ್ ಆಫ್ ಮಂಗಳೂರು ಡೌನ್ ಟೌನ್ ಜಂಟಿಯಾಗಿ ಆಯೋಜಿಸಿದೆ.

ಈ ಕಾರ್ಯಕ್ರಮವನ್ನು ಶ್ರೀ.ವಿನಯ ಭಟ್, ಜನರಲ್ ಮ್ಯಾನೇಜರ್, ಕರ್ನಾಟಕ ಬ್ಯಾಂಕ್ ಹೆಡ್ ಆಫೀಸ್, ಮಂಗಳೂರು ಇವರು ಉದ್ಘಾಟಿಸಿ ಮಂಗಳೂರಿನಲ್ಲಿ ಪ್ರಾರಂಭವಾದ ಕರ್ನಾಟಕ ಬ್ಯಾಂಕ್ ಎಂಬ ಸ್ಟಾರ್ಟ್‌ಅಪ್‌ ಬೆಳೆದು ಈಗ ಬೃಹಾದಾಕಾರದ ಬ್ಯಾಂಕ್ ಆಗಿ ಮಾರ್ಪಟ್ಟಿದೆ. ಇಲ್ಲಿ ಸೇರಿದ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.

ಸೂರಜ್ ಹೆಬ್ಬಾರ್ ನೆರಿಯಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶ್ರೀ.ಮ್ರುದುಲ್ ಎಮ್. ಮಹೇಶ್ ಮಾತಾನಾಡುತ್ತಾ 95%ದಷ್ಟು ಸ್ಟಾರ್ಟ್‌ಅಪ್‌ ಅವನತಿಗೊಂಡಿದ್ದರೂ ವಿದ್ಯಾರ್ಥಿಗಳಾದ ತಾವು ಈ ಕಾರ್ಯಾಗಾರದ ಸದುಪಯೋಗ ಪಡೆದು ತಮ್ಮದೇ ಆದ ಹೊಸ ಸ್ಟಾರ್ಟ್‌ಅಪ್‌ನ್ನು ಪ್ರಾರಂಭಿಸಿ ಉದ್ಯಮಿಗಳಾಗಿ ಎಂದು ಹಾರೈಸಿದರು.

ಸಿ.ಎ.ಎಸ್.ಎಸ್.ನಾಯಕ್ ರವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿ ನುಡಿದರು. ಕಾರ್ಯಕ್ರಮದಲ್ಲಿ ಸುಮಾರು 55 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷರಾದ ಡಾ.ರಾಘವೇಂದ್ರ ಹೊಳ್ಳರವರು ಕಾರ್ಯಕ್ರಮವನ್ನು ನಡೆಸಲು ಸಹಾಯ ಮಾಡಿದ ಎಲ್ಲರಿಗೂ ವಂದಿಸಿ ಕಾರ್ಯಾಗಾರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.

ಕಾಲೇಜಿನ ಪ್ರಾಂಶುಪಾಲೆ ಡಾ. ಮಾಲಿನಿ ಎನ್.ಹೆಬ್ಬಾರ್ ವಂದಿಸಿದರು. ಕುಮಾರಿ ಪೂಜಾ ರಾವ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು