ಮಂಗಳೂರು: ಕೆಐಎಡಿಬಿ ಭೂಸ್ವಾಧೀನದ ನಕಲಿ ಪತ್ರವನ್ನು ಕಾಂಗ್ರೆಸ್ ಸೃಷ್ಟಿಸಿದೆ ಎಂದು ಮೂಡುಬಿದಿರೆ-ಮೂಲ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಆರೋಪಿಸಿದ್ದಾರೆ.
ಚುನಾವಣೆ ಸಂದರ್ಭ ಶಾಸಕರಾಗಿ ತಾನು ಮಾಡಿರುವ ತಪ್ಪುಗಳನ್ನು ಮರೆಮಾಚಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎಂದು ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಆರೋಪಿಸಿದ್ದಾರೆ. ಅಲ್ಲದೆ ನಾನು ದೇವರ ಮುಂದೆ ಪ್ರಮಾಣ ಮಾಡಲು ಸಿದ್ಧ ಎಂದು ತಿಳಿಸಿದ್ದಾರೆ.
ಕೇವಲ 7 ತಿಂಗಳ ಹಿಂದೆ ಭೂಸ್ವಾಧೀನ ಹೋರಾಟ ಸಮಿತಿ ಆರಂಭಿಸಿದ್ದು, ಈ ಹೋರಾಟದಲ್ಲಿ ಸ್ವತಃ ಭಾಗಿಯಾಗಿರುವ ನನಗೆ ಈ ಕುರಿತು ವಿವರವಿದೆ.
ಬಳ್ಕುಂಜೆ, ಕವತ್ತಾರು ಪ್ರದೇಶದಲ್ಲಿ ಜಾಗ ನೋಟಿಫೈ ಮಾಡಲು ಮುಂದಾದಾಗ ಕೃಷಿಕರು ಪ್ರತಿಭಟಿಸಿರುವುದು ಸತ್ಯವಾದ ವಿಚಾರ. ಈ ಕುರಿತು ಅವರು ಬಳ್ಕುಂಜೆಯಲ್ಲಿ ದೈವ ದೇವರ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಮಿಥುನ್ ಸವಾಲು ಎಸೆದಿದ್ದಾರೆ.