News Karnataka Kannada
Monday, April 29 2024
ಮಂಗಳೂರು

ಮಂಗಳೂರು: 2022ರ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರದಾನ ಸಮಾರಂಭ

mangaluru-yakshagana-kalaranga-puraskaram-2022
Photo Credit : News Kannada

ಮಂಗಳೂರು: ಯಕ್ಷಗಾನ ಕಲಾರಂಗ ಉಡುಪಿ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದಕಲಾವಿದರಿಗೆ, ಕಲಾಸಂಘಟನೆಗೆ ಪ್ರಶಸ್ತಿ ಪ್ರದಾನ ಮಾಡುತ್ತಾ ಬಂದಿದ್ದು, ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ನವಂಬರ್ 13, ಭಾನುವಾರ ನಡೆಯಲಿದೆ. ಸಂಸ್ಥೆಯ ಆಶ್ರಯದಾತರಾಗಿದ್ದ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಯೂ ಸೇರಿದಂತೆ ಕಲಾ ಸಾಧಕರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ದಿನಪೂರ್ತಿ ನಡೆಯುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪೂರ್ವಾಹ್ನ 10.30 ಗಂಟೆಗೆ ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿಯವರು ಮಾಡಲಿದ್ದಾರೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ವೈದ್ಯರೂ, ಯಕ್ಷಗಾನ ಪೋಷಕರೂ ಆದ ಡಾ.ಪದ್ಮನಾಭಕಾಮತ್ ವಹಿಸಲಿದ್ದಾರೆ.ಯಕ್ಷಗಾನ ವಿದ್ವಾಂಸ ಪ್ರೊ.ಎಂ.ಎಲ್. ಸಾಮಗರು ಅಭ್ಯಾಗತರಾಗಿ ಭಾಗವಹಿಸುತ್ತಾರೆ.

ಪೂರ್ವಾಹ್ನ 11ರಿಂದ 12ರ ವರೆಗೆ‘ತೆಂಕುತಿಟ್ಟಿನ ಯಕ್ಷಗಾನ ಮೇಳಗಳು’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದ್ದುಇತಿಹಾಸಕ್ಕೆ ಸೇರಿಹೋದ ವಿವಿಧ ಮೇಳಗಳ ಕುರಿತು  ದಾಮೋದರಕುಡ್ವ, ವಿಜಯಲಕ್ಷ್ಮೀ ಶಾನುಭೋಗ್,  ಎಂ. ನಾ. ಚಂಬಲ್ತಿಮಾರ್, ಸಾವಿತ್ರಿ ಪೂರ್ಣಚಂದ್ರ ಮತ್ತು  ಶಾಂತಾರಾಮಕುಡ್ವ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುತ್ತಾರೆ. ಸಂಕಿರಣದ ಅಧ್ಯಕ್ಷತೆಯನ್ನು ಡಾ.ಉಪ್ಪಂಗಳ ಶಂಕರ ನಾರಾಯಣ ಭಟ್ ವಹಿಸಲಿದ್ದು ಭಾಸ್ಕರ ರೈ ಕುಕ್ಕುವಳ್ಳಿ ಸಮನ್ವಯಕಾರರಾಗಿರುತ್ತಾರೆ.

ಅಪರಾಹ್ನ 12.00 ರಿಂದ 1.00 ಗಂಟೆಯವರೆಗೆ ‘ಯಕ್ಷಗಾನಕಲಾರಂಗ : ಸಂಘಟನೆಯ ಮಾದರಿ’ ಎಂಬ ವಿಷಯದಕುರಿತ ಮಾತುಕತೆಯಲ್ಲಿ  ಮಧುಕರಭಾಗವತ, ಸಿರಿಬಾಗಿಲು ರಾಮಕೃಷ್ಣಮಯ್ಯ,  ಸತೀಶ ಅಡಪ, ರವೀಶ್‌ಎಚ್. ಟಿ.,  ಶೇಖರ ಮಣಿಯಾಣಿ, ರವಿ ಅಲೆವೂರಾಯ, ಡಾ.ಶ್ರುತಿಕೀರ್ತಿರಾಜ್,  ಮಹಾವೀರ ಪಾಂಡಿಮತ್ತು  ಮಿಥುನ್‌ಕೊಡೆತ್ತೂರು ಪಾಲ್ಗೊಳ್ಳಲಿದ್ದಾರೆ.  ನವನೀತ್ ಶೆಟ್ಟಿಕದ್ರಿ ಸಮನ್ವಯಕಾರರಾಗಿರುತ್ತಾರೆ.

ಸಂಜೆ 4.00 ರಿಂದ ಜರಗಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದು, ಅಧ್ಯಕ್ಷತೆಯನ್ನು ಲೋಕಸೇವಾ ಆಯೋಗದ ಅಧ್ಯಕ್ಷರಾದ ಡಾ.ಟಿ ಶ್ಯಾಮ್ ಭಟ್ ವಹಿಸಲಿದ್ದಾರೆ. ಮಂಗಳೂರು ದಕ್ಷಿಣಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್‌ www.yakshaganakalaranga.com ವೆಬ್‌ಸೈಟ್ ಲೋಕಾರ್ಪಣೆ ಮಾಡಲಿದ್ದು, ಕಲಾವಿದರ ಕುರಿತ ಸಾಕ್ಷ್ಯ ಚಿತ್ರವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಅನಾವರಣಗೊಳಿಸುತ್ತಾರೆ. ಮುಖ್ಯ ಅಭ್ಯಾಗತರಾಗಿ ಹರಿಕೃಷ್ಣ ಪುನರೂರು, ಪ್ರೊ.ಎಂ. ಬಿ. ಪುರಾಣಿಕ್,  ಪ್ರದೀಪಕುಮಾರ್‌ ಕಲ್ಕೂರ, ಪ್ರೊ.ಜಿ. ಆರ್. ರೈ,  ಪಿ. ಗೋಕುಲನಾಥ ಪ್ರಭು, ಡಾ.ಜೆ. ಎನ್. ಭಟ್,  ಲೀಲಾಕ್ಷಕರ್ಕೆರ, ಪಣಂಬೂರು ವಾಸುದೇವ ಐತಾಳ್ ಮತ್ತು ಸಿಎ ಶಿವಾನಂದ ಪೈ ಭಾಗವಹಿಸುತ್ತಾರೆ. ವಿಶ್ವೇಶತೀರ್ಥ‘ಯಕ್ಷಗಾನಕಲಾರಂಗ’ ಪ್ರಶಸ್ತಿಯನ್ನು ಉಪ್ಪಿನಕುದ್ರು ಗಣೇಶ ಯಕ್ಷಗಾನ ಗೊಂಬೆಯಾಟ ತಂಡಕ್ಕೆ ನೀಡಲಾಗುವುದು.

ಅಂತೆಯೇ ವಿವಿಧಗಣ್ಯರ ಸ್ಮರಣಾರ್ಥ ನೀಡುವ‘ಯಕ್ಷಗಾನಕಲಾರಂಗ ಪ್ರಶಸ್ತಿ’ಯನ್ನು ಡಿ. ಮನೋಹರ್‌ಕುಮಾರ್, ಕೃಷ್ಣ ಸ್ವಾಮಿ ಜೋಯಿಸ, ಮಲವಳ್ಳಿ ನಾರಾಯಣ ಭಟ್, ಅಣ್ಣಪ್ಪ ಕುಲಾಲ್ ನೀರ್ಜಡ್ಡು, ರಾಮಜೋಗಿ ಜೋಡುಕಲ್ಲು, ಮುಂಡ್ಕೂರು ಕೃಷ್ಣ ಶೆಟ್ಟಿ, ಉಮೇಶ್ ಭಟ್ ಬಾಡ, ಐರ್‌ಬೈಲ್‌ಆನಂದ ಶೆಟ್ಟಿ, ಮಹಮ್ಮದ್‌ಗೌಸ್, ಜೋಗುಕುಲಾಲ್, ವೆಂಕಪ್ಪಆಚಾರ್, ಸಜಿಪ ಚೆನ್ನಪ್ಪಗೌಡ, ಲಕ್ಷ್ಮೀಶ ಅಮ್ಮಣ್ಣಾಯ, ವಿದ್ವಾನ್‌ ಗಣಪತಿ ಭಟ್, ಕೂಟೇಲು ಬಾಲಕೃಷ್ಣ ಭಟ್ ಮತ್ತು ಮಾರ್ವಿ ನಿತ್ಯಾನಂದ ಹೆಬ್ಬಾರ್‌ ಇವರಿಗೆ ಪ್ರದಾನ ಮಾಡಲಾಗುವುದು. ಗಣ್ಯರ ಗೌರವಾರ್ಥ ನೀಡುವ ಪ್ರಶಸ್ತಿಯನ್ನು ಯು.ಆನಂದ್ ಮತ್ತು ಶಿವರಾಮ ಪಣಂಬೂರು ಸ್ವೀಕರಿಸಲಿದ್ದಾರೆ. ಯಕ್ಷಗಾನ ಕಾರ್ಯಕರ್ತರಿಗೆ ನೀಡುವ ಯಕ್ಷಚೇತನ ಪ್ರಶಸ್ತಿಯನ್ನು ಎಚ್.ಎನ್. ಶೃಂಗೇಶ್ವರ ಅವರಿಗೆ ಪ್ರದಾನ ಮಾಡಲಾಗುವುದು.

ಪ್ರಶಸ್ತಿ ಪ್ರದಾನ ಸಮಾರಂಭದ ಪೂರ್ವದಲ್ಲಿಅಪರಾಹ್ನ 2.00 ರಿಂದ ತೆಂಕು ತಿಟ್ಟಿನ ಯಕ್ಷಗಾನ ರೂಪಕ ‘ಶ್ರೀ ಮನೋಹರ ಸ್ವಾಮಿ ಪರಾಕು’ ಮತ್ತು ಸಂಜೆ 6.00 ರಿಂದ ಬಡಗುತಿಟ್ಟಿನ ಯಕ್ಷಗಾನ ‘ಚಕ್ರಚಂಡಿಕೆ’ ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ  ಎಮ್.ಗಂಗಾಧರರಾವ್  ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು