News Karnataka Kannada
Tuesday, May 07 2024
ಮಂಗಳೂರು

ಟ್ರೋಲ್ ಆಗುತ್ತಿದೆ ಬಿಜೆಪಿ ಟಿಕೆಟ್ ವಂಚಿತ ಸದಾನಂದ ಗೌಡರ ಹಳೆ ವಿಡಿಯೋ

ಬಿಜೆಪಿ ಟಿಕೆಟ್ ವಂಚಿತ ಡಿ.ವಿ ಸದಾನಂದ ಗೌಡರು ಈ ಹಿಂದೆ ಬಿಜೆಪಿ ಬಗ್ಗೆ ಹೊಗಳಿದ್ದ ವಿಡಿಯೋವೊಂದು ವೈರಲ್‌ ಆಗ್ತಿದೆ. ತನಗೆ ಬಿಜೆಪಿ ನೀಡಿದ್ದ ಕೊಡುಗೆಗಳ ಬಗ್ಗೆ ಡಿವಿ ಸದಾನಂದ ಗೌಡರು ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಪುತ್ತೂರಿನಲ್ಲಿ ಮಾತನಾಡಿದ್ದರು.
Photo Credit : NewsKarnataka

ಮಂಗಳೂರು: ಬಿಜೆಪಿ ಟಿಕೆಟ್ ವಂಚಿತ ಡಿ.ವಿ ಸದಾನಂದ ಗೌಡರು ಈ ಹಿಂದೆ ಬಿಜೆಪಿ ಬಗ್ಗೆ ಹೊಗಳಿದ್ದ ವಿಡಿಯೋವೊಂದು ವೈರಲ್‌ ಆಗ್ತಿದೆ. ತನಗೆ ಬಿಜೆಪಿ ನೀಡಿದ್ದ ಕೊಡುಗೆಗಳ ಬಗ್ಗೆ ಡಿವಿ ಸದಾನಂದ ಗೌಡರು ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಪುತ್ತೂರಿನಲ್ಲಿ ಮಾತನಾಡಿದ್ದರು.

ಇಲ್ಲಿಯವರೆಗೆ ಬಿಜೆಪಿ ಪಕ್ಷ ನನ್ನನ್ನ ಬೆಳೆಸಿದೆ. ಇನ್ನೂ ನಾನೇನು ಪಕ್ಷಕ್ಕೆ ಕೊಡಬೇಕು ಅದು ಮಾತ್ರ ಉಳಿದಿದೆ. ನಾನು ಪಕ್ಷದಿಂದ ಏನನ್ನು ಅಪೇಕ್ಷೆ ಮಾಡಬಾರದು. ಪಾರ್ಟಿಯ ಅಧ್ಯಕ್ಷ, ಎಂ ಎಲ್ ಎ, ಎಂ ಪಿ, ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿ, ರಾಷ್ಟ್ರೀಯ ಕಾರ್ಯದರ್ಶಿ, ರಾಷ್ಟ್ರೀಯ ಉಪಾಧ್ಯಕ್ಷ, ಕೇಂದ್ರದ ನರೇಂದ್ರ ಮೋದಿಯವರ ಸಂಪುಟದಲ್ಲಿ 7 ವರ್ಷಗಳ ಕಾಲ ಸಂಸದನಾಗುವ ಅವಕಾಶ ನೀಡಿದೆ. ಇನ್ನೂ ನನಗೆ ಸಂತೋಷ ಬರಲಿಲ್ಲ ಅಂದ್ರೆ ನಾನು ಮನುಷ್ಯನ ಪ್ರಾಣಿನಾ? ಎಂದಿದ್ದ ಡಿವಿ ಸದಾನಂದ ಗೌಡರ ಹಳೆ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ.

ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್‌ ಈಗ ಶೋಭಾ ಕರಂದ್ಲಾಜೆ ಪಾಲಾಗಿದ್ದು, ಸದಾನಂದ ಗೌಡರು ಪಕ್ಷ ತೊರೆಯುವ ಬಗ್ಗೆ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಅವರ ಹಳೇ ವೀಡಿಯೋ ಭರದಿಂದ ಹರಿದಾಡತೊಡಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು