ಮಂಗಳೂರು: ಬಿಜೆಪಿ ಟಿಕೆಟ್ ವಂಚಿತ ಡಿ.ವಿ ಸದಾನಂದ ಗೌಡರು ಈ ಹಿಂದೆ ಬಿಜೆಪಿ ಬಗ್ಗೆ ಹೊಗಳಿದ್ದ ವಿಡಿಯೋವೊಂದು ವೈರಲ್ ಆಗ್ತಿದೆ. ತನಗೆ ಬಿಜೆಪಿ ನೀಡಿದ್ದ ಕೊಡುಗೆಗಳ ಬಗ್ಗೆ ಡಿವಿ ಸದಾನಂದ ಗೌಡರು ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಪುತ್ತೂರಿನಲ್ಲಿ ಮಾತನಾಡಿದ್ದರು.
ಇಲ್ಲಿಯವರೆಗೆ ಬಿಜೆಪಿ ಪಕ್ಷ ನನ್ನನ್ನ ಬೆಳೆಸಿದೆ. ಇನ್ನೂ ನಾನೇನು ಪಕ್ಷಕ್ಕೆ ಕೊಡಬೇಕು ಅದು ಮಾತ್ರ ಉಳಿದಿದೆ. ನಾನು ಪಕ್ಷದಿಂದ ಏನನ್ನು ಅಪೇಕ್ಷೆ ಮಾಡಬಾರದು. ಪಾರ್ಟಿಯ ಅಧ್ಯಕ್ಷ, ಎಂ ಎಲ್ ಎ, ಎಂ ಪಿ, ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿ, ರಾಷ್ಟ್ರೀಯ ಕಾರ್ಯದರ್ಶಿ, ರಾಷ್ಟ್ರೀಯ ಉಪಾಧ್ಯಕ್ಷ, ಕೇಂದ್ರದ ನರೇಂದ್ರ ಮೋದಿಯವರ ಸಂಪುಟದಲ್ಲಿ 7 ವರ್ಷಗಳ ಕಾಲ ಸಂಸದನಾಗುವ ಅವಕಾಶ ನೀಡಿದೆ. ಇನ್ನೂ ನನಗೆ ಸಂತೋಷ ಬರಲಿಲ್ಲ ಅಂದ್ರೆ ನಾನು ಮನುಷ್ಯನ ಪ್ರಾಣಿನಾ? ಎಂದಿದ್ದ ಡಿವಿ ಸದಾನಂದ ಗೌಡರ ಹಳೆ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ.
ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಈಗ ಶೋಭಾ ಕರಂದ್ಲಾಜೆ ಪಾಲಾಗಿದ್ದು, ಸದಾನಂದ ಗೌಡರು ಪಕ್ಷ ತೊರೆಯುವ ಬಗ್ಗೆ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಅವರ ಹಳೇ ವೀಡಿಯೋ ಭರದಿಂದ ಹರಿದಾಡತೊಡಗಿದೆ.