ಕೊಟ್ಟಾರಚೌಕಿ: 5 ಕೋಟಿ ರೂ.ವೆಚ್ಚದಲ್ಲಿ ಆಗುತ್ತಿರುವ ಕೊಟ್ಟಾರ ಚೌಕಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ವೀಕ್ಷಿಸಿದರು.
ಈ ಸಂದರ್ಭ ಸ್ಥಳೀಯ ಕಾರ್ಪೊರೇಟರ್ ಆಗಿರುವ ಕಿರಣ್ ಕುಮಾರ್ ಕೊಡಿಕಲ್, ಪಾಲಿಕೆ ಇಂಜಿನಿಯರ್ ಖಾದರ್ ಜತೆಗಿದ್ದು ಮಾಹಿತಿ ನೀಡಿದರು. ಕಾಮಗಾರಿಯನ್ನ ತ್ವರಿತವಾಗಿ ಮುಗಿಸುವಂತೆ ಈ ಸಂದರ್ಭ ಸಲಹೆಯನ್ನ ನೀಡಿದರು.
ಕೊಟ್ಟಾರ ಚೌತಿ ಜಂಕ್ಷನ್ ನಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಂಕ್ರೆಟೀಕರಣ ಮತ್ತಿತರ ಕಾಮಗಾರಿ ನಡೆಯುತ್ತಿದೆ. ಉಮೇಶ್ ಮಲರಾಯ ಸಾನ,ಜಯಪ್ರಕಾಶ್ ಕುಲಾಲ್,ಅಶೋಕ್ ಕುಲಾಲ್,ರಾಜೇಶ್ ,ಸುರೇಶ್ ಭಂಡಾರಿ,ಕಿರಣ್ ಕೋಟ್ಯಾನ್,ಗೋಪಾಲ್ ಶೆಟ್ಟಿ ಸ್ಥಳೀಯರು,ಪಕ್ಷದ ಪ್ರಮುಖರು,ಗ್ರಾಮಸ್ಥರು ಉಪಸ್ಥಿತರಿದ್ದರು.
ಅಮರ್ ಜವಾನ್ ಸ್ಮಾರಕ ಹಾಗೂ ವೃತ್ತ ಹೆದ್ದಾರಿ ಹಾಗೂ ನಗರ ಸಂಪರ್ಕಿಸುವ ಕೊಟ್ಟಾರಚೌಕಿಯಲ್ಲಿ ಅಮರ್ ಜವಾನ್ ಸ್ಮಾರಕ ಹಾಗೂ ವೃತ್ತ ನಿರ್ಮಾಣ ನಡೆಯಲಿದೆ. ವೀರಯೋಧರ ಸ್ಮರಣೆ ಹಾಗೂ ಗೌರವ ಸಲ್ಲಿಸಲು ಈ ಯೋಜನೆ ರೂಪಿಸಲಾಗಿದೆ.ಇದರ ಜತೆಗೆ ಮಾಲೇಮಾರ್ ನಿಂದ ಬರುವ ಭಾಗದಲ್ಲಿ ಸರ್ವಿಸ್ ರಸ್ತೆ , ಕೊಟ್ಟಾರಚೌಕಿಯಲ್ಲಿ ಶೌಚಾಲಯ ಹಾಗೂ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಲಿದೆ.ಇದೀಗ ಭೂಗತ ಕೇಬಲ್ ಪೈಪ್ ಲೈನ್ ಸ್ಥಳಾಂತರ, ಕುಡಿಯುವ ನೀರಿನ ಪೈಪ್ ಲೈನ್ ಹೊಸದಾಗಿ ಈ ಭಾಗದಲ್ಲಿ ಹಾಕುವ ಕಾಮಗಾರಿ ಪ್ರಗತಿಯಲ್ಲಿದೆ. ಮೂರು ತಿಂಗಳ ಒಳಗಾಗಿ ಕಾಮಗಾರಿ ಮುಗಿಸುವಂತೆ ಸೂಚಿಸುವುದಾಗಿ ನುಡಿದರು.