News Karnataka Kannada
Monday, April 29 2024
ಮಂಗಳೂರು

ಕೊಟ್ಟಾರಚೌಕಿ ಜಂಕ್ಷನ್ ಕಾಮಗಾರಿ ತ್ವರಿತಕ್ಕೆ ಡಾ.ಭರತ್ ಶೆಟ್ಟಿ ವೈ ಸೂಚನೆ

Dr Bharath Shetty Y instructs to expedite kottarachowki junction work
Photo Credit : News Kannada

ಕೊಟ್ಟಾರಚೌಕಿ: 5 ಕೋಟಿ ರೂ.ವೆಚ್ಚದಲ್ಲಿ ಆಗುತ್ತಿರುವ ಕೊಟ್ಟಾರ ಚೌಕಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ವೀಕ್ಷಿಸಿದರು.

ಈ ಸಂದರ್ಭ ಸ್ಥಳೀಯ ಕಾರ್ಪೊರೇಟರ್ ಆಗಿರುವ ಕಿರಣ್ ಕುಮಾರ್ ಕೊಡಿಕಲ್, ಪಾಲಿಕೆ ಇಂಜಿನಿಯರ್ ಖಾದರ್ ಜತೆಗಿದ್ದು ಮಾಹಿತಿ ನೀಡಿದರು. ಕಾಮಗಾರಿಯನ್ನ ತ್ವರಿತವಾಗಿ ಮುಗಿಸುವಂತೆ ಈ ಸಂದರ್ಭ ಸಲಹೆಯನ್ನ ನೀಡಿದರು.

ಕೊಟ್ಟಾರ ಚೌತಿ ಜಂಕ್ಷನ್ ನಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಂಕ್ರೆಟೀಕರಣ ಮತ್ತಿತರ ಕಾಮಗಾರಿ ನಡೆಯುತ್ತಿದೆ. ಉಮೇಶ್ ಮಲರಾಯ ಸಾನ,ಜಯಪ್ರಕಾಶ್ ಕುಲಾಲ್,ಅಶೋಕ್ ಕುಲಾಲ್,ರಾಜೇಶ್ ,ಸುರೇಶ್ ಭಂಡಾರಿ,ಕಿರಣ್ ಕೋಟ್ಯಾನ್,ಗೋಪಾಲ್ ಶೆಟ್ಟಿ ಸ್ಥಳೀಯರು,ಪಕ್ಷದ ಪ್ರಮುಖರು,ಗ್ರಾಮಸ್ಥರು ಉಪಸ್ಥಿತರಿದ್ದರು.

ಅಮರ್ ಜವಾನ್ ಸ್ಮಾರಕ ಹಾಗೂ ವೃತ್ತ ಹೆದ್ದಾರಿ ಹಾಗೂ ನಗರ ಸಂಪರ್ಕಿಸುವ ಕೊಟ್ಟಾರಚೌಕಿಯಲ್ಲಿ ಅಮರ್ ಜವಾನ್ ಸ್ಮಾರಕ ಹಾಗೂ ವೃತ್ತ ನಿರ್ಮಾಣ ನಡೆಯಲಿದೆ. ವೀರಯೋಧರ ಸ್ಮರಣೆ ಹಾಗೂ ಗೌರವ ಸಲ್ಲಿಸಲು ಈ ಯೋಜನೆ ರೂಪಿಸಲಾಗಿದೆ.ಇದರ ಜತೆಗೆ ಮಾಲೇಮಾರ್ ನಿಂದ ಬರುವ ಭಾಗದಲ್ಲಿ ಸರ್ವಿಸ್ ರಸ್ತೆ , ಕೊಟ್ಟಾರಚೌಕಿಯಲ್ಲಿ ಶೌಚಾಲಯ ಹಾಗೂ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಲಿದೆ.ಇದೀಗ ಭೂಗತ ಕೇಬಲ್ ಪೈಪ್ ಲೈನ್ ಸ್ಥಳಾಂತರ, ಕುಡಿಯುವ ನೀರಿನ ಪೈಪ್ ಲೈನ್ ಹೊಸದಾಗಿ ಈ ಭಾಗದಲ್ಲಿ ಹಾಕುವ ಕಾಮಗಾರಿ ಪ್ರಗತಿಯಲ್ಲಿದೆ. ಮೂರು ತಿಂಗಳ ಒಳಗಾಗಿ ಕಾಮಗಾರಿ ಮುಗಿಸುವಂತೆ ಸೂಚಿಸುವುದಾಗಿ ನುಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು