ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಅಂಗವಾಗಿ ಕದ್ರಿ ಉದ್ಯಾನವನ ಸಮೀಪ ನಿರ್ಮಾಣಗೊಂಡಿರುವ ಫುಡ್ ಕೋರ್ಟ್ ಮಳಿಗೆಗಳ ಹರಾಜು ಪ್ರಕ್ರಿಯೆ ಇದುವರೆಗೂ ನಡೆದಿಲ್ಲ.
ಈ ಬಗ್ಗೆ ಸ್ಪೀಕರ್ ಯು.ಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ಕದ್ರಿ ಪಾರ್ಕ್ ನಲ್ಲಿರುವ 35ಕ್ಕೂ ಅಧಿಕ ಮಳಿಗೆಗಳನ್ನು ಈ ಹಿಂದೆ ಓಬ್ಬನೇ ವ್ಯಕ್ತಿಗೆ ಕೊಡಲು ನಿರ್ಧರಿಸಿದ್ದರು. ಆದರೆ ಹಣವಿದೆ ಎಂದು ಓರ್ವನಿಗೆ ಒಬ್ಬನೇ ವ್ಯಕ್ತಿಗೆ ಎಲ್ಲ ಮಳಿಗೆ ನೀಡುವುದು ಸರಿಯಲ್ಲ. ನಿರ್ವಹಣೆಗೆ ಸುಲಭವಾಗುತ್ತದೆ ಎಂಬ ಕಾರಣ ನೀಡಿ ಈ ಹಿಂದಿನ ಸರ್ಕಾರ ಸರ್ಕಾರ ಅಂಗಡಿಗಳನ್ನು ನೀಡಲು ಪ್ಲ್ಯಾನ್ ಮಾಡಿತ್ತು. ಆದರೆ ನಮ್ಮ ಸರ್ಕಾರ ಭವಿಷ್ಯದ ದೂರದೃಷ್ಟಿ ಇರಿಸಿ ಉತ್ತಮ ಯೋಜನೆ ರೂಪಿಸಿದ್ದೇವೆ. ನಿರ್ವಹಣೆ ಸೇರಿದಂತೆ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿ ಆದಷ್ಟು ಬೇಗ ಉತ್ತಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.