ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಂಪ್ರದಾಯದಂತೆ ಸಿಂಹಸಂಕ್ರಮಣ ದಿನ ಬುಧವಾರ ತೈಲದಾನ ಮತ್ತು ಪಡಿಕಾಳು ವಿತರಣೆ ಮಾಡಲಾಯಿತು.
ವಿವರ: ತೆಂಗಿನ ಎಣ್ಣೆ: 3,320 ಲೀಟರ್, ಕುಚ್ಚಲು ಅಕ್ಕಿ: 6035 ಕೆ.ಜಿ., ಪಡಿಕಾಳು: 1207 ಕೆ.ಜಿ., ಉಪ್ಪು: 1207 ಕೆ.ಜಿ., ಮೆಣಸು:482 ಕೆ.ಜಿ.
ಆಧುನಿಕ ಕನ್ನಡ ಕಥನ ಸಾಹಿತ್ಯ: ಅಧ್ಯಯನ ಶಿಬಿರ
ಬೆಳ್ತಂಗಡಿ: ಹೆಗ್ಗೋಡು ನೀನಾಸಂ ಪ್ರತಿಷ್ಠಾನ ಮತ್ತು ಉಜಿರೆಯ ಎಸ್.ಡಿಎಂ. ಸ್ವಾಯತ್ತ ಕಾಲೇಜಿನಲ್ಲಿ ಸಂಘದ ಜಂಟಿ ಆಶ್ರಯದಲ್ಲಿ ಕಾಲೇಜಿನಲ್ಲಿ ಇದೇ 19 ಮತ್ತು 20 ರಂದು ಎರಡು ದಿನಗಳಲ್ಲಿ ಆಧುನಿಕ ಕನ್ನಡ ಕಥನ ಸಾಹಿತ್ಯ-ಅಧ್ಯಯನ ಶಿಬಿರ ಆಯೋಜಿಸಲಾಗಿದೆ.
ಇಂದು ಶುಕ್ರವಾರ ಬೆಳೀಗ್ಯೆ ಹತ್ತು ಗಂಟೆಗೆ ಖ್ಯಾತ ವಿಮರ್ಶಕ ಸಾಗರದ ಪ್ರೊ. ಟಿ.ಪಿ. ಅಶೋಕ ಅಧ್ಯಯನ ಶಿಬಿರವನ್ನು ಉದ್ಘಾಟಿಸುವರು.
ಕಾಲೇಜಿನ ಪ್ರಾಚಾರ್ಯ ಡಾ. ಪಿ.ಎನ್. ಉದಯಚಂದ್ರ ಅಧ್ಯಕ್ಷತೆ ವಹಿಸುವರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಶುಭಾಶಂಸನೆ ಮಾಡುವರು. ಎರಡು ದಿನ ನಡೆಯುವ ಅಧ್ಯಯನ ಶಿಬಿರದಲ್ಲಿ ಸಾಗರದ ಪ್ರೊ. ಜಶ್ವಂತ್ ಜಾದವ್, ಪ್ರೊ. ಎಚ್.ಎಂ. ಶಿವಾನಂದ, ಡಾ. ಮಾಧವ ಚಿಪ್ಪಳಿ ಮತ್ತು ಕುಮಟಾದ ಖ್ಯಾತ ಕತೆಗಾರ ಪ್ರೊ. ಶ್ರೀಧರ್ ಬಳಗಾರ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ, ಮಾರ್ಗದರ್ಶನ ನೀಡುವರು.