ಮಂಗಳೂರು: ಉಳ್ಳಾಲ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪಕ್ಷದಿಂದ ಕಣಕ್ಕಿಳಿಸಿದ್ದ ನನ್ನನ್ನು ಕಾಂಗ್ರೆಸ್ ಪಕ್ಷದ ಯುಟಿ ಖಾದರ್ ಬೆಂಬಲಿಗರು ಅಪಹರಿಸಿ ಕರೆದೊಯ್ದು ಬಲವಂತವಾಗಿ ನಾಮಪತ್ರ ಹಿಂತೆಗೆಯುವಂತೆ ಮಾಡಿದ್ದಾರೆ ಎಂಬ ಮಂಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಲ್ತಾಫ್ ಕುಂಪಲ ಹೇಳಿಕೆ ಸುಳ್ಳು ಎಂದು ಮಂಗಳೂರಿನಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಕಾಂಗ್ರೆಸ್ ಪಕ್ಷ ಯಾವುದೇ ಅಭ್ಯರ್ಥಿ ಮೇಲೆ ಒತ್ತಡ ಹೇರಿಲ್ಲ. ಮೊಯಿದ್ದೀನ್ ಬಾವ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಏ.20ಕ್ಕೆ ಅಲ್ತಾಫ್ ನಾಮಪತ್ರ ಸಲ್ಲಿಸಿದ್ದಾರೆ.
ಅವರೊಳಗಿನ ಭಿನ್ನಮತ ಕಾರಣದಿಂದ ಹೆದರಿ ನಾಮಪತ್ರ ಹಿಂದೆ ಪಡೆದಿದ್ದಾರೆ. ಬಿ.ಎಂ.ಫಾರೂಕ್ ಕ್ಷೇತ್ರದಲ್ಲೇ ಅವರ ಅಭ್ಯರ್ಥಿ ನಾಮಪತ್ರ ಹಿಂದಕ್ಕೆ ಪಡೆಯುವುದು ಅವರಿಗೆ ನಾಚಿಗೇಡಾಗಿದೆ. ಈ ಕಾರಣಕ್ಕೆ ಜೆಡಿಎಸ್ ನಾಯಕರು ಹೊರಗಿನಿಂದ ಬಂದು ಒತ್ತಡ ಹಾಕಿದ್ದಾರೆ. ಇಲ್ಲಿ ಯಾವುದೇ ಕಾಂಗ್ರೆಸ್ ಕಾರ್ಯಕರ್ತರು ನಾಯಕರು ಇವರಿಗೆ ಬೆದರಿಕೆ ಹಾಕಿಲ್ಲ. ಮುಸ್ತಫಾ, ಉಸ್ಮಾನ್ ಕಲ್ಲಾಪು ಕಾಂಗ್ರೆಸ್ ನಾಯಕರು. ಆದ್ರೆ ಅವ್ರು ಯಾವುದೇ ಬೆದರಿಕೆ ಹಾಕಿ ಒತ್ತಡ ಹಾಕಿಲ್ಲ.ಇಬ್ಬರೂ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಬಾಲ್ಯ ಸ್ನೇಹಿತರು. ಪ್ರತಿಯೊಂದು ವ್ಯವಹಾರ ಒಟ್ಟಿಗೆ ನಡೆಯುವುದು, ಅಪಹರಣ ಪ್ರಕರಣ ನಂಬಲಾಗದು. ಜೆಡಿಎಸ್ ನಾಯಕರ ಒತ್ತಡಕ್ಕೆ ಮಣಿದು ಅಭ್ಯರ್ಥಿಯಿಂದ ಸುಳ್ಳು ಆರೋಪ ಮಾಡಿಸಿದ್ದಾರೆ.
ಯುಟಿ ಖಾದರ್ ಅವರಿಗೆ ಈ ಬಗ್ಗೆ ಯಾವುದೇ ವಿಚಾರ ತಿಳಿದಿಲ್ಲ. ಖಾದರ್ ಗೆ ವಿಚಾರವೇ ಗೊತ್ತಿಲ್ಲ, ಚುನಾವಣಾ ಪ್ರಚಾರ ಬಿಸಿಯಾಗಿದ್ದಾರೆ. ಖಾದರ್ ಅವರಿಗೆ ಯಾರು ನಿಂತ್ರು ಒಂದೆ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿಯೇ ಮಾಡ್ತಾರೆ. ಎಸ್ ಡಿಪಿಐ ಬಿಜೆಪಿಗಿಂತ ಕಾಂಗ್ರೆಸ್ ಅನ್ನು ಟಾರ್ಗೆಟ್ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.