ಕುಂದಾಪುರ: ಯುವಕರ ನಾಯಕತ್ವಕ್ಕೆ ಮನ್ನಣೆಯನ್ನು ನೀಡುವುದರ ಮುಖೇನ ಬೈಂದೂರು ಸೇರಿದಂತೆ ರಾಜ್ಯದ ಇನ್ನಿತರ ಕ್ಷೇತ್ರಗಳಲ್ಲಿ ಬಿಜೆಪಿ ಹೊಸ ಆಯಾಮವನ್ನು ಸೃಷ್ಟಿಮಾಡಿದೆ.ದೇಶ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಯುವ ಶಕ್ತಿ ಕೊಡುಗೆ ಅಪಾರವಾದುದು ಎಂದು ರಾಜ್ಯ ಬಿಜೆಪಿ ಯುವಮೋರ್ಚಾ ಖಜಾಂಚಿ ಅನಿಲ್ ಶೆಟ್ಟಿ ಹೇಳಿದರು.
ಬಿಜೆಪಿ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬೈಂದೂರು ವಿಧಾನಸಭೆ ಕ್ಷೇತ್ರದಲ್ಲಿ ಗುರುರಾಜ್ ಗಂಟಿಹೊಳೆ ಸ್ಪರ್ಧೆಯಿಂದ ಯುವಕರಲ್ಲಿ ಹೊಸ ಚೈತ್ಯ ಮೂಡಿದೆ ಈ ರೀತಿ ಬದಲಾವಣೆ ಮುಂದಿನ ಪೀಳಿಗೆಗೂ ವಿಸ್ತರವಾಗಬೇಕು ಎಂದರು.
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಯುವ ಮೋರ್ಚಾದ ಮೂಲಕ ರಾಜ್ಯಾದ್ಯಂತ ಬೂತ್ ಮಟ್ಟದಿಂದ ಉತ್ಸಾಹಿ ಯುವಕರ ಸಂಘಟನೆ ಮಾಡಲಾಗಿದೆ.ತಳಮಟ್ಟದಿಂದ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಧರ್ಮ, ದೇಶ, ಸಂಸ್ಕ್ರತಿಯ ಉಳಿವು ನವ ತರುಣರಲ್ಲಿ ಜಾಗೃತವಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರಜ್ವಲ್ ಶೆಟ್ಟಿ ಕಾಲ್ತೋಡು,ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶರತ್ ಉಪ್ಪುಂದ, ಮಂಡಲ ಯುವ ಮೋರ್ಚಾ ಕಾರ್ಯದರ್ಶಿ ಅನುರ್ ಮೆಂಡನ್,ಸಂತೋಷ ಮಡಿವಾಳ, ಆಕಾಶ ಪೂಜಾರಿ, ಮಾಧ್ಯಮ ವಿಭಾಗದ ಸಂಚಾಲಕ ಗಣೇಶ ಗಾಣಿಗ ಉಪಸ್ಥಿತರಿದ್ದರು.