ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಮೂರನೇ ದಿನದಂದು ಅಮೃತ ವರ್ಷಿಣಿ ಮಂಟಪದಲ್ಲಿ ಲಲಿತ ಕಲಾ ಗೋಷ್ಠಿ ಕಾರ್ಯಕ್ರಮದಲ್ಲಿ ನಡೆದ ಬಾಲ ರಾಮಾಯಣ ನೆರೆದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.
ಸ್ವಾತಿ ತಿರುನಾಳ್ ರಾಮೋವರ್ಮ ರಚಿಸಿರುವ ಕೃತಿಯ ಒಂದು ಭಾಗ ಭಾವಯಾಮಿ ರಘುರಾಮಮ್ ಆಗಿದ್ದು ಇದನ್ನು ನ್ರತ್ಯ ರೂಪಕ ರೂಪದಲ್ಲಿ ತೋರಿಸುವಲ್ಲಿ ವಿದ್ವಾನ್ ಉನ್ನತ್ ಹೆಚ್ ಆರ್ ಅವರ ನಾಟ್ಯಕಲಾವಿಲಾಸ ತಂಡ ಯಶಸ್ವಿಯಾಯಿತು.
ಸಂಸ್ಕ್ರತಿ ಸಂಬಂ ಧಗಳ ಅರ್ಥಗಳನ್ನೇ ಮರೆತು ಬಿಟ್ಟಿರುವ ಇಂದಿನ ಯುವ ಪೀಳಿಗೆಗೆ ಸಂಭಂದ ಭಾವನೆ ಇವುಗಳ ಅರ್ಥವನ್ನು ರಾಮಾಯಣದ ಒಂದೊಂದು ಸನ್ನಿವೇಶವನ್ನು ನಮ್ಮ ಜೀವನದಲ್ಲಿ ಹೇಗೆ ರೂಢಿಸಿಕೊಳ್ಳಬೇಕು. ಅವರಲ್ಲಿರುವ ಆದರ್ಶ ಗುಣಗಳನ್ನು ನಾವುಸಹ ಬೆಳಿಸಿಕೊಂಡು ಅವುಗಳನ್ನುನಮ್ಮ ಜೀವನದಲ್ಲಿಹೇಗೆ ರೂಢಿಸಿ ಕೊಳ್ಳಬೇಕು ತಪ್ಪು ಮಾಡಿದ ವ್ಯಕ್ತಿಗೂ ಒಂದು ಅವಕಾಶವನ್ನು ನೀಡಬೇಕೆನ್ನುವ ಸಂದೇಶವನ್ನು ನ್ರತ್ಯ ರೂಪಕದ ಮೂಕಾಂತರ ರಾಮಾಯಣದ ಸನ್ನಿವೇಶದಲ್ಲಿ ಸಾರಲಾಯಿತು.
ಆರು ವರ್ಷದ ಮಕ್ಕಳಿಂದ ಹಿಡಿದು ಎಫ್ಪ್ಪತ್ತು ವರ್ಷದವರು ಸಹ ಅಭಿನಯಿಸಿರುವುದು ವಿಶೇಷತೆ. ಆಂಜನೇಯ ಪಾತ್ರಧಾರಿಯ ನಟನೆ ಪ್ರೇಕ್ಷಕರ ಉತ್ಸಹ ವನ್ನು ಇಮ್ಮಡಿ ಗೊಳಿಸಿತು.
ಹಿನ್ನಲೆ ಗಾಯನ ಕಾರರು ತಮ್ಮ ಅದ್ಭುತವಾದ ಸಂಗೀತದ ಮೂಲಕ ವಿದೂಷಿ. ವಿಭಾಶ್ರೀ(ಗಾಯನ) ವಿದೂಷಿ. ಸಮೃದ್ಧ(ಕೊಳಲು) ವಿದೂಷಿ. ವಿಕ್ರಂ(ಬೃದಂಗ) ವಿನಯ್ ರಂಗಧೋಳ್(ರಿದಂಪ್ಯಾಡ್) ವಿದ್ವಾನ್. ತುಮಕೂರು ಯಶಸ್ವಿ( ವಯೋಲಿನ್) ಪ್ರೇಕ್ಷಕರನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋದರು.
ಕಾರ್ಯಕ್ರಮದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತ್ರಶ್ರೀ ಹೇಮಾವತಿ ಹೆಗ್ಗಡೆ. ಹರ್ಷೇಂದ್ರ ಕುಮಾರ್ ಹೆಗ್ಗಡೆ ಮತ್ತು ಹೆಗ್ಗಡೆ ಕುಟುಂಬದ ಸದಸ್ಯರು ಹಾಗೂ ಸಾವಿರಾರು ಜನರು ಉಪಸ್ಥಿತರಿದ್ದರು.
ವರದಿ- ಕಾರ್ತಿಕ ಹೆಗಡೆ
ಚಿತ್ರಗಳು- ಭಾರತಿ ಹೆಗಡೆ