ಮಂಗಳೂರು: ಮಂಗಳೂರು ನಗರದ ಮಿಲಾಗ್ರಿಸ್ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜು ವತಿಯಿಂದ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ “ನವರಂಗ್ 2022″ ಸ್ಪರ್ಧೆಗಳನ್ನು ನ. 22ರಂದು ಹಮ್ಮಿಕೊಳ್ಳಲಾಯಿತು.
ಮಂಗಳೂರು ಆರನ್ ಕ್ಯಾಟರರ್ಸ್ ನ ಮಾಲೀಕರಾದ ಐವನ್ ಡಿಸೋಜಾ ಇವರು ಮುಖ್ಯ ಅತಿಥಿಯಾಗಿ ಆಗಮಿಸಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಮಾನಸಿಕ ಹಾಗೂ ಬೌದ್ಧಿಕ ವಿಕಸನಕ್ಕೆ ನವರಂಗ್ ಸ್ಪರ್ಧೆ ಸಹಕಾರಿಯಾಗಿದ್ದು, ಇಂತಹ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳ ಗಮನ ಕೇಂದ್ರೀಕೃತಗೊಳ್ಳುವುದು. ಪಠ್ಯದ ಜತೆಗೆ ಇಂಥ ಸ್ಪರ್ಧೆ ಗಳು ಮಕ್ಕಳ ಭವಿಷ್ಯಕ್ಕೂ ಸಹಕಾರಿಯಾಗುವುದು. ಇಂತಹ ಸ್ಪರ್ಧೆ ಭವಿಷ್ಯದಲ್ಲಿ ವಿದ್ಯಾರ್ಥಿಗಳ ದೂರದೃಷ್ಟಿ ಚಿಂತನೆಯ ಮೂಲಕ ಹೊಸ ರೂಪು ರೇಷೆ ನೀಡಲು ಪ್ರಯತ್ನಿಸುತ್ತದೆ ಎಂದು ಹೇಳಿದರು.
ಮಿಲಾಗ್ರಿಸ್ ಕಾಲೇಜಿನ ಸಂಚಾಲಕರಾದ ವಂದ. ಗುರು. ಬೊನವೆಂಚರ್ ನಜರೆತ್ ಅವರು ಅಧ್ಯಕ್ಷೀಯಾ ಭಾಷಣದಲ್ಲಿ ನವರಂಗವು ಬಣ್ಣದ ಮಿಶ್ರಣವಾಗಿದ್ದು, ಯುವ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೆಚ್ಚಿಸುತ್ತದೆ. ಎಂದು ಹೇಳಿದರು.
ಮಿಲಾಗ್ರಿಸ್ ಚರ್ಚ್ ನ ಪಾಲನಾ ಸಮಿತಿಯ ಕಾರ್ಯದರ್ಶಿ ಹಿಲ್ದಾ ರೋಡ್ರಿಗೆಸ್ ಗೌರವನ್ವಿತ ಅತಿಥಿ ಯಾಗಿ ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮಿಲಾಗ್ರಿಸ್ ಕಾಲೇಜಿನ ಉಪ ಪ್ರಾಂಶುಪಾಲರಾದ ಕ್ಸಾಸ್ಸಿನ ರೋಡ್ರಿಗೆಸ್, ವಿದ್ಯಾರ್ಥಿಗಳಾದ ಜೋಸ್ಟನ್ ಡಿ ಸೋಜಾ, ದೇಯಾನ್ ಜೋಯ್ ಲೋಬೊ, ಜೀತನ್ ರಿಗೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಂಗೋಲಿ, ಕೊಲೇಜ್, ಛಾಯಾಚಿತ್ರ, ಟಿ-ಶರ್ಟ್ ಪೇಂಟಿಂಗ್, ಮುಖ ವರ್ಣಕಲೆ, ಮಾಸ್ಕ್ ಆರ್ಟ, ಪೆನ್ಸಿಲ್ ಸ್ಕೆಚಿಂಗ್, ತ್ಯಾಜ್ಯದಿಂದ ಕಲೆ, ಬೆಂಕಿಯಿಲ್ಲದೆ ಅಡುಗೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
22 ಪದವಿಪೂರ್ವ ಕಾಲೇಜು ತಂಡಗಳು ಭಾಗವಹಿಸಿದವು . ಸಮಗ್ರ ಫಲಿತಾಂಶ ದಲ್ಲಿ ಕ್ರಿಯೇಟ್ ಪದವಿ ಪೂರ್ವ ಕಾಲೇಜು, ಕಾರ್ಕಳ, ಪ್ರಥಮ, ವಿಜಯ ಕಾಲೇಜು, ಮುಲ್ಕಿ ದ್ವಿತೀಯ, ಬಹುಮಾನ ಜಯಿಸಿತು. ಪ್ರಾಂಶುಪಾಲ ಮೈಕಲ್ ಸಾಂತುಮಾಯೋ ಸ್ವಾಗತಿಸಿದರು. ಹೋಟೆಲ್ ಮ್ಯಾನೇಜ್ಮೆಂಟ್ ವಿಭಾಗ ಉಪನ್ಯಾಸಕಿ ಹಾಗೂ ಸಂಯೋಜಕಿಯಾಗಿರುವ ವಿನಿತಾ ಮೆಂದೊನ್ಸಾ ವಂದಿಸಿದರು. ವಿದ್ಯಾರ್ಥಿನಿ ರೆಶೇಲ್ ಕಾರ್ಯಕ್ರಮ ನಿರೂಪಿಸಿದರು.