News Karnataka Kannada
Monday, April 29 2024
ಮಂಗಳೂರು

ಉಜಿರೆ: ಹೆಗ್ಗಡೆಯವರಿಗೆ ಅಪಮಾನ ಖಂಡಿಸಿ ಭಕ್ತ ವೃಂದದಿಂದ ಬೃಹತ್ ಪ್ರತಿಭಟನೆ

Devotees protest against Heggade's insult
Photo Credit : News Kannada

ಮಂಗಳೂರು: ಸೌಜನ್ಯ ವಿಚಾರ ಮುಂದಿಟ್ಟು ಹೆಗ್ಗಡೆಯವರನ್ನು ಅಪಮಾನ ಮಾಡುತ್ತಿರುವುದನ್ನು ಖಂಡಿಸಿ ಉಜಿರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಭಕ್ತ ವೃಂದದ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಮಾವೇಶ ದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಲ್ ಎಚ್ ಮಂಜುನಾಥ್ ಮಾತನಾಡಿ, ‘ಶ್ರೀ ಧರ್ಮಸ್ಥಳ ಕ್ಕೆ ನಾಡಿನಾದ್ಯಂತ ಜನರು ಬರುತ್ತಾರೆ, ಈ ಕ್ಷೇತ್ರಕ್ಕೆ ಆರು ನೂರು ವರ್ಷಗಳ ಇತಿಹಾಸವಿದೆ, ಧರ್ಮಸ್ಥಳ ದಲ್ಲಿ ವ್ಯಕ್ತಿ ಪ್ರಧಾನ ಅಲ್ಲ, ಧರ್ಮಸ್ಥಳ ಸಂಸ್ಥಾನ ಪ್ರಧಾನ. ಸೌಜನ್ಯ ನಿಗೆ ನ್ಯಾಯ ಬೇಕೆಂದು ಹನ್ನೊಂದು ವರ್ಷಗಳಿಂದ ನಾವು ಕೇಳುತ್ತಿದ್ದೇವೆ. ಹನ್ನೊಂದು ವರ್ಷದ ಹಿಂದೆ ಆದ ಹತ್ಯೆ ಯನ್ನು ಖಂಡಿಸದವರು ಮನುಷ್ಯರೇ ಅಲ್ಲ. ಈ ಪ್ರಕರಣದಲ್ಲಿ ಆರೋಪ ಹೊಂದಿದ ವ್ಯಕ್ತಿ ವ್ಯಕ್ತಿ ಖುಲಾಸೆ ಆಗಿದ್ದು ನ್ಯಾಯಾನಾ? ಆ ವ್ಯಕ್ತಿ ಕರಾಟೆ ಬ್ಲಾಕ್ ಬೆಲ್ಟ್, ಮಂಪರು ಪರೀಕ್ಷೆ ಗೆ ಒಪ್ಪಿಲ್ಲ ಅದು ಗೊತ್ತಿದ್ಯಾ? ಮಾನಸಿಕ ವ್ಯಕ್ತಿ ಅಂತಾ ಹೇಳುವ ವ್ಯಕ್ತಿ ಡಿಪ್ಲೋಮಾ ಪದವೀಧರ ಅನ್ನೋದು ಗೊತ್ತಿದ್ಯಾ’ ಎಂದರು.

ಈ ಪ್ರಕರಣ ವನ್ನು ಸರ್ಕಾರ ಸರಿಯಾಗಿ ಗಮನಿಸಬೇಕು.ಸರಕಾರದ ತನಿಖೆಯಲ್ಲಿ ಮುಂದುವರಿಯಬೇಕು. ಇಲ್ಲಿ ಕೊಲೆಗಡುಕನಿಗೆ ಗೌರವ ನೀಡುತ್ತಾರೆ, ಆದರೆ ಹೆಗ್ಗಡೆ ಗೆ ಗೌರವ ನೀಡಲಾಗುತ್ತಿಲ್ಲ, ಧರ್ಮಸ್ಥಳ ವನ್ನು 2012ರಿಂದ‌ ಹೀಯಾಳಿಸಲಾಗುತ್ತಿದೆ ಯೂಟ್ಯೂಬ್ ಚಾನೆಲ್ ಗಳಲ್ಲಿ ಹೆಗ್ಗಡೆಯವರನ್ನು ಬಯ್ಯಲಾಗುತ್ತಿದೆ. ಇದರ ಬದಲು ಹೆಗ್ಗಡೆಯವರ ವಿರುದ್ಧ ಒಂದು ಸಾಕ್ಷಿಯನ್ನು ಹೋರಾಟಗಾರರು ನೀಡಲಿ ಎಂದು ಸವಾಲು ಹಾಕಿದರು.

ಸೌಜನ್ಯ ಕುಟುಂವಸ್ಥರು ಸುಳ್ಳಿನಿಂದ ಹೊರಬರಲಿ ಆಗ ಸತ್ಯದರ್ಶನ ಆಗುತ್ತದೆ, ನಮ್ಮದು ಸುಳ್ಳಿನ ವಿರುದ್ಧದ ಸತ್ಯದ ಹೋರಾಟ, ನಮಗೆ ಹೋರಾಟಗಾರರ ಮೇಲೆ ಹಾಗೂ ಸೌಜನ್ಯನ ತಾಯಿ ಕುಸುಮಾವತಿ ಮೇಲೆ ದ್ವೇಷ ಇಲ್ಲ.

ಹೋರಾಟಗಾರರಲ್ಲಿ ಸತ್ಯ ಇದ್ದರೆ ಸಮಾವೇಶವನ್ನು ನಿಲ್ಲಿಸೋಕೆ ಯಾಕೆ ಪ್ರಯತ್ನಪಟ್ಟಿದ್ದೀರಿ?  ಸಮಾವೇಶದಲ್ಲಿ ಭಾಗವಹಿಸಿದರೆ ಅಣ್ಣಪ್ಪ ಸ್ವಾಮಿ ಶಾಪ ಸಿಗುತ್ತದೆ ಎಂದು ಯಾಕೆ ಹೇಳಿದ್ದೀರಿ?  ಎಂದು ಮಂಜುನಾಥ್ ಪ್ರಶ್ನಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು