ಉಜಿರೆ: ಏಸು ಕ್ರಿಸ್ತರು ಶಾಂತಿ,ಪ್ರೀತಿ,ಸೌಹಾರ್ದತೆಯ ಸಂದೇಶವನ್ನು ಸಾರಿದರು. ನೆರೆಹೊರೆಯವರನ್ನು ಪ್ರೀತಿಸಿ,ಹಸಿದವರ ಹಸಿವನ್ನು ನೀಗಿಸು.ಪರಸ್ಪರ ಜಾತಿ,ಧರ್ಮ,ಕಲಹ,ವೈಮನಸ್ಸು ತೊರೆದು ಶಾಂತಿ,ಸೌಹಾರ್ದತೆಯಿಂದ ನಾವೆಲ್ಲ ಒಂದೇ ಕುಟುಂಬದವರೆಂದು ಭಾವಿಸಿ ಜಾತಿ,ಧರ್ಮದ ಎಲ್ಲೆ ಮೀರಿ ಒಂದಾಗಿ ಬದುಕೋಣ ಎಂಬ ಸಂದೇಶ ನೀಡಿದರು. ನಾವು ಮಕ್ಕಳಲ್ಲಿ ದೇವರನ್ನು ಕಾಣುತ್ತೇವೆ. ಅವರಿಗೆ ದ್ವೇಷ,ಅಸೂಯೆ ಎಂಬುದು ಗೊತ್ತಿಲ್ಲ. ಮಾನವೀಯತೆ,ಮನುಷ್ಯತ್ವ ದಿಂದ ರಾಷ್ಟ್ರ ಕಾಯುವ ಸೈನಿಕರು ಹಾಗೂ ನಮ್ಮ ಜೀವನಾಡಿ ರೈತರನ್ನು ಎಂದಿ ಗೂ ಮರೆಯಬಾರದೆಂದು ಲಾಯಿಲ ಸಿಕ್ವೇರಾ ರೋಡ್ ಲೈನ್ಸ್ ನ ಉದ್ಯಮಿ ರೋಷನ್ ಸಿಕ್ವೇರಾ ನುಡಿದರು.
ಅವರು ಡಿ. 21. ರಂದು ಉಜಿರೆಯ ಸಾನಿಧ್ಯ(ಎಂಡೋಸಲ್ಫಾನ್ ಪೀಡಿತ ಮಕ್ಕಳ) ಕೌಶಲ್ಯ ತರಬೇತಿ ಕೇಂದ್ರದಲ್ಲಿ ಕ್ರಿಸ್ತ್ಮಸ್ ಸಂಭ್ರಮಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಉಜಿರೆ ಬೆನಕ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ! ಗೋಪಾಲಕೃಷ್ಣ ಕೆ. ಅವರು ಪ್ರಪಂಚದಲ್ಲಿರುವ ಎಲ್ಲರಲ್ಲೂ ಭೇದವಿಲ್ಲ ಎಂಬ ಏಸುಕ್ರಿಸ್ತರ ಸಂದೇಶ ಸಾರುವ ಕ್ರಿಸ್ತ್ಮಸ್ ಆಚರಣೆ ಅರ್ಥಪೂರ್ಣವಾದುದು. ಸಾನಿಧ್ಯ ಕೇಂದ್ರದ ಶುಚಿತ್ವ,ಮಕ್ಕಳ ನಗುಮುಖ ಕಂಡು ಸಂತೋಷವಾಗುತ್ತಿದೆ. ಸಾನಿಧ್ಯದ ಮಕ್ಕಳಿಗೆ ತಮ್ಮ ಆಸ್ಪತ್ರೆಯಿಂದ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು. ಕ್ರಿಸ್ತ್ಮಸ್ ಕೇಕ್ ಕತ್ತರಿಸಿ ಮಕ್ಕಳಿಗೆ ನೀಡಲಾಯಿತು.
ಮುಖ್ಯ ಅತಿಥಿ ಲೈವ್ ಮೀಡಿಯಾ ನ್ಯೂಸ್ ನ ಪ್ರಿನ್ಸಿಪಾಲ್ ಎಡಿಟರ್ ಅಶ್ರಫ್ ಆಲಿ ಕುಞ ದುಡ್ಡು ಎಲ್ಲರ ಹತ್ತಿರವಿದೆ. ಆದರೆ ಪ್ರೀತಿ ವಿಶ್ವಾಸ ಎಲ್ಲರಲ್ಲಿರುವುದಿಲ್ಲ. ಮಕ್ಕಳ ಕಷ್ಟದ ಜೀವನದ ಜತೆಗೆ ಕೇಂದ್ರದ ಅವರ ಸೇವೆಗೆ ಧನ್ಯರಾಗೋಣ. ಎಲ್ಲರೂ ಪ್ರೀತಿಯಿಂದ ಪರಸ್ಪರ ಸೌಹಾರ್ದತೆಯಿಂದ ಬದುಕೋಣ ಎಂಬ ಕ್ರಿಸ್ತ ಸಂದೇಶವನ್ನು ಮುಂದುವರಿಸೋಣ ಎಂದರು. ಇನ್ನೋರ್ವ ಮುಖ್ಯ ಅತಿಥಿ ಅಂತಾರಾಷ್ಟ್ರೀಯ ರೋಯಲ್ ಸರಕಾರಿ ಆಸ್ಪತ್ರೆಯ ವೈದ್ಯಕೀಯ ಸ್ಪೆಷಲಿಸ್ಟ್ ಡಾ! ರುಪೋರ್ಡ್ ಸಿಕ್ವೇರಾ ಅವರು ದೇವರು ಮತ್ತು ಮಕ್ಕಳಲ್ಲಿ ವ್ಯತ್ಯಾಸವಿಲ್ಲ. ಇನ್ನೊಬ್ಬರ ಮನಸ್ಸು ನೋಯಿಸದೆ ಕೈಲಾದಷ್ಟು ಸಹಾಯ ಮಾಡೋಣ ಎಂದು ಅಭಿಪ್ರಾಯ ಪಟ್ಟರು.
ಆಡಳಿತಾಧಿಕಾರಿ ಡಾ! ವಸಂತಕುಮಾರ್ ಶೆಟ್ಟಿ ಅವರು ಸಿಬ್ಬಂದಿಗಳಿಗೆ ನೀಡಿದ ಕ್ರಿಸ್ತ್ಮಸ್ ಉಡುಗೊರೆಯನ್ನು ಅತಿಥಿಗಳು ವಿತರಿಸಿದರು.
ಕೇಂದ್ರದ ಮಾರ್ಗದರ್ಶಕಿ ಮಲ್ಲಿಕಾ ಸ್ವಾಗತಿಸಿ, ಪ್ರಸ್ತಾವಿಸಿ, ರುಬೀನಾ ನಿರೂಪಿಸಿ ,ದೀಪಕ್ ವಂದಿಸಿದರು. ಎಂಡೋಸಲ್ಫಾನ್ ಪೀಡಿತ ಮಕ್ಕಳಿಂದ ಕ್ರಿಸ್ತ್ಮಸ್ ಹಾಡುಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.