ಮಂಗಳೂರು: ಜರ್ಮನ್ ಫೆಡರಲ್ ಮಂತ್ರಾಲಯದಿಂದ ನಿಯೋಜಿಸಲಾದ ‘Deutsche Gesellschaft für Internationale Zusammenarbeit (GIZ) GmbH’, ಭಾರತದ ವಸತಿ ಮತ್ತು ನಗರ ಮಂತ್ರಾಲಯದ ಸಹಯೋಗದೊಂದಿಗೆ ಸ್ಮಾರ್ಟ್ ಸಿಟಿಗಳಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಅಳವಡಿಸಿ, ವಿಪತ್ತು ನಿರ್ವಹಣೆ ಮಾಡುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದೆ.
ಈ ಯೋಜನೆಯನ್ನು ಕಾರ್ಯಗತಗೊಳಿಸಲು ಕರ್ನಾಟಕದಲ್ಲಿ ಮಂಗಳೂರನ್ನು ಆಯ್ಕೆ ಮಾಡಲಾಗಿದೆ. ಇದು ಭಾರತದ ವಿವಿಧ ಕಡೆಗಳಲ್ಲಿ ಡಿಸೆಂಬರ್ ಕೊನೆಯ ವರೆಗೆ ನಡೆಯಲಿದೆ.
ಇದೆ ವಿಷಯದ ಮೇಲೆ, ಮಂಗಳೂರು ಮಹಾನಗರಪಾಲಿಕೆಯ ಸಹಯೋಗದಲ್ಲಿ ಮಧ್ಯಸ್ಥಗಾರರಿಗೆ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಇದು ನಗರದ ಗೊಲ್ದಫಿಂಚ್ ಹೋಟೆಲ್ ನಲ್ಲಿ 7ನೇ ಸೆಪ್ಟೆಂಬರ್ ನಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ದಯವಿಟ್ಟು ನೀವು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ, ಈ ಮೂಲಕ ವಿನಂತಿಸಲಾಗಿದೆ.