ಮಂಗಳೂರು: ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ತಮ್ಮ ಕ್ಷೇತ್ರವನ್ನು ಸಾಧ್ಯತೆಗಳ ಸಾಗರ ಎಂದು ಕರೆದು, ಲಭ್ಯವಿರುವ ಸಂಪನ್ಮೂಲಗಳು ಹಾಗು ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಅಗತ್ಯ ಎಂದಿದ್ದಾರೆ.
ಚುನಾವಣಾ ಪ್ರಚಾರದ ಕೊನೆಯ ದಿನವಾದ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದ ಚೌಟ, ನವಯುಗ ನವಪಥ ಪ್ರಣಾಳಿಕೆ ಗಮನಾರ್ಹ ಬದಲಾವಣೆ ತರುವ ೯ ವಿಷಯಗಳನ್ನು ಒಳಗೊಂಡಿದೆ ಎಂದರು. ʼಪ್ರಣಾಳಿಕೆಯು ಸಾರಿಗೆ ಸೌಕರ್ಯ ಅಭಿವೃದ್ಧಿ, ಗ್ರಾಮೀಣ ಜನರ ಅಗತ್ಯತೆಗಳ ಪೂರೈಕೆ, ಕೈಗಾರಿಕೆಗಳಿಗೆ ಉತ್ತೇಜನ, ಹೂಡಿಕೆ ಆಕರ್ಷಣೆ, ಸ್ಟಾರ್ಟ್ಪ್ಗಳಿಗೆ ಉತ್ತೇಜನ ಹಾಗು ಉದ್ಯೋಗಾವಕಾಶ ಕಲ್ಪಿಸುವತ್ತ ಗಮನ ಹರಿಸಿದೆʼ ಎಂದು ಅವರು ಮಾಹಿತಿ ನೀಡಿದರು.
ಈ ವೇಳೆ ನಗರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಮಾತನಾಡಿದ ಅವರು, ತುಳುನಾಡಿದ ಸಂಸ್ಕೃತಿ ಹಾಗು ಪರಂಪರೆಯ ಬಗ್ಗೆ ವಿಶೇಷ ಗಮನ ಹರಿಸಲಾಗುತ್ತದೆ ಎಂದರು. ಇದರೊಂದಿಗೆ ಮೀನುಗಾರರು ಹಾಗು ಕೃಷಿಕರ ಕಡೆ ಗಮನ ಹರಿಸುವತ್ತ ಒತ್ತು ನೀಡಲಾಯಿತು.
ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಿ, ಫಿಲಂ ಸಿಟಿ ಸ್ಥಾಪಿಸಿ, ಮೀನುಗಾರಿಕಾ ಕಾಲೇಜುಗಳನ್ನು ವಿಶ್ವವಿದ್ಯಾಲಯವಾಗಿ ಪರಿವರ್ತಿಸಿ ಸಂಶೋಧನೆಗೆ ಆದ್ಯತೆ ನೀಡಲಾಗುವುದು ಎಂದು ಚೌಟ ಭರವಸೆ ನೀಡಿದರು.