ಮಂಗಳೂರು: ಅಲ್ಪಸಂಖ್ಯಾತರ ಸಭೆಯಲ್ಲಿ ಮೂಡುಬಿದಿರೆ ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಆಡಿದ ಮಾತೊಂದು ಇದೀಗ ವೈರಲ್ ಆಗುತ್ತಿದೆ.
ಮೂಡುಬಿದಿರೆಯಲ್ಲಿ ನಡೆದ ಸಭೆಯೊಂದರಲ್ಲಿ ಶಾಸಕ ಕೋಟ್ಯಾನ್ ಮುಸಲ್ಮಾನರು, ಕ್ರೈಸ್ತರು ನಮಗೆ ವೋಟ್ ಹಾಕುವುದಿಲ್ಲ. ಅವರಿಗೆ ನಾವು ಯಾಕೆ ಕೆಲಸ ಮಾಡಿಕೊಡಬೇಕು ಎಂದು ನಮ್ಮ ಪಕ್ಷದವರು ಅಹಂಕಾರದಿಂದ ಮಾತನಾಡುತ್ತಾರೆ. ಬೇರೆಯವರು ಇದನ್ನು ಹೇಳುವುದಿಲ್ಲ. ನಾನು ನಡೆ, ನುಡಿಯವನಾದ ಕಾರಣ ಹೇಳುತ್ತೇನೆ. ಮುಸ್ಲಿಮರು, ಕ್ರೈಸ್ತರನ್ನು ಕಾಂಗ್ರೆಸ್ನವರು ಕೂಲಿಯಾಳುಗಳಂತೆ ನೋಡುತ್ತಾರೆ. ಇಂತಹ ಪ್ರವೃತ್ತಿ ನಮ್ಮ ಪಕ್ಷದವರಿಗೂ ಇದೆ ಎಂದು ಹೇಳುತ್ತಿರುವುದು ವಿಡಿಯೋದಲ್ಲಿದೆ.
ನಾನು ಮಸೀದಿ, ಚರ್ಚ್, ಪ್ರತಿಯೊಂದು ಕಡೆಗೂ ತಾರತಮ್ಯವಿಲ್ಲದೇ ಅಭಿವೃದ್ಧಿ ಮಾಡಿದ್ದೇನೆ ಎಂಬುದು ವಿಡಿಯೋದಲ್ಲಿದೆ.