ಮಂಗಳೂರು: ನಗರದ ಪ್ರತಿಷ್ಠಿತ ಲ್ಯಾಂಡ್ ಟ್ರೇಡ್ಸ್ ಡೆವಲಪರ್ ಬಿಲ್ಡರ್ ಆ್ಯಂಡ್ ಸಂಸ್ಥೆಯಿಂದ ನಿರ್ಮಾಣಗೊಳ್ಳಲಿರುವ ಲ್ಯಾಂಡ್ ಟ್ರೇಡ್ಸ್ ಪ್ರಿಸ್ಟಿನ್ ವಸತಿ ವಾಣಿಜ್ಯ ಸಮುಚ್ಚಯಕ್ಕೆ ಜು.5 ರಂದು ಬೆಳಗ್ಗೆ 9.30ಕ್ಕೆ ಭೂಮಿ ಪೂಜೆ ನಡೆಯಿತು. ಎ.ಜೆ. ಸಮೂಹದ ಅಧ್ಯಕ್ಷ ಡಾ. ಎ.ಜೆ.ಶೆಟ್ಟಿ ಅವರು ಲ್ಯಾಂಡ್ ಟ್ರೇಡ್ಸ್ ಮಾಲೀಕ ಕೆ.ಶ್ರೀನಾಥ್ ಹೆಬ್ಬಾರ್ ಮತ್ತು ಯೋಜನೆಯ ಭೂ ಮಾಲೀಕರಾದ ಕವಿತಾ ಚಂದ್ರಶೇಖರನ್ ನಾಯರ್ ಉಪಸ್ಥಿತಿಯಲ್ಲಿ ಭೂಮಿಪೂಜೆ ನೆರವೇರಿಸಿದರು.
ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್, ಎಂ. ಆರ್.ಜಿ. ಗ್ರೂಪ್ನ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ದೇರೆಬೈಲ್ ದಕ್ಷಿಣ ವಾರ್ಡ್ನ ಕಾರ್ಪೊರೇಟರ್ ಹಾಗೂ ಮಾಜಿ ಮೇಯರ್ ಎಂ.ಶಶಿಧರ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಮೇಯರ್ ಜಯಾನಂದ ಅಂಚನ್ ಅಧ್ಯಕ್ಷತೆ ವಹಿಸಿದ್ದರು. 1.3 ಎಕರೆ ಜಮೀನಿನಲ್ಲಿ 37 ಅಂತಸ್ತುಗಳ ಈ ಗಗನ ಚುಂಬಿ ಯೋಜನೆಯು 3 ಬಿಎಚ್ಕೆ ಮತ್ತು 4 ಬಿಎಚ್ ಕಗಳ 102 ಸೂಪರ್ ಲಕ್ಷುರಿ ಅಪಾರ್ಟ್ಮೆಂಟ್ಗಳನ್ನು ಹೊಂದಲಿದೆ. ನಗರದ ಅತೀ ಪ್ರಮುಖವಾದ ಲೇಡಿ ಹಿಲ್-ಚಿಲಿಂಬಿ ಪ್ರದೇಶದಲ್ಲಿ ವಾಸ್ತು ವೈಭವದ ಸಮುಚ್ಚಯವಾಗಿ ಲ್ಯಾಂಡ್ ಟ್ರೇಡ್ಸ್ ಪ್ರಿಸ್ಟಿನ್ ಮೂಡಿ ಬರಲಿದೆ.
ಸೂಪರ್ ಲಕ್ಷುರಿ ಸಮುಚ್ಚಯವು ಈಗಾಗಲೇ ರೇರಾ, ಮುಡಾ, ನಗರಪಾಲಿಕೆ ಮತ್ತಿತರ ಎಲ್ಲ ಕಾನೂನಾತ್ಮಕ ಸಂಸ್ಥೆಗಳ ಮಂಜೂರಾತಿ ಪಡೆದಿದೆ. ಈಗಾಗಲೇ ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯು ಮೌರಿಷ್ಕ ಪ್ಯಾಲೇಸ್, ಅಟ್ಯಾಂಟಿಸ್, ಸಾಲಿಟೇರ್ನಂತಹ ಬಹುಮಹಡಿ ಯೋಜನೆಗಳಿಂದ ಯಶಸ್ಸನ್ನು ಪಡೆದಿದ್ದು, ಪ್ರಿಸ್ಟಿನ್ ಯೋಜನೆಯು ಲ್ಯಾಂಡ್ ಟ್ರೇಡ್ಸ್ನ ಪ್ರತಿಷ್ಠಿತ ಬಹುಮಹಡಿ ಕಟ್ಟಡಗಳಾದ ಬೆಂದೂರ್ವೆಲ್ನ ಅಲುರ, ಕದ್ರಿಯ ಶಿವಭಾಗ್ ಯೋಜನೆಗಳ ಸ್ವರೂಪದಲ್ಲಿ ಗ್ರಾಹಕರಿಗೆ ಅರ್ಪಣೆಯಾಗಲಿದೆ.
ಅತ್ಯಾಧುನಿಕ ವಿನ್ಯಾಸ: ಪ್ರಿಸ್ಟಿನ್ ಯೋಜನೆಯು ವಸತಿ ಮತ್ತು ವಾಣಿಜ್ಯ ಸಮುಚ್ಚಯವಾಗಿದೆ. ಆದರೆ ಈ ಎರಡು ವಿಭಾಗಗಳು ಪ್ರತ್ಯೇಕವಾದ ಪ್ರವೇಶ ಸೌಲಭ್ಯ ಹೊಂದಿದ್ದು, ಗರಿಷ್ಠ ಖಾಸಗಿತನ ಮತ್ತು ಭದ್ರತಾ ಸೌಲಭ್ಯ ಸಹಿತವಾಗಿರುತ್ತದೆ.