ಬೆಳ್ತಂಗಡಿ: ಅಳದಂಗಡಿಯ ದೋರಿಂಜೆ ನಿವಾಸಿ ಯೋಗೀಶ್ ರಾವ್ (50) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ಇವರಿಗೆ ಕಿಡ್ನಿ, ಲಿವರ್ ನಲ್ಲಿ ಅನಾರೋಗ್ಯ ಕಾಣಿಸಿಕೊಂಡಿದ್ದು ಬುಧವಾರ ಸಂಜೆಯ ವೇಳೆ ಅವರು ಮೃತಪಟ್ಟಿದ್ದಾರೆ.
ಇವರು ತಾಲೂಕು ಪಂಚಾಯತಿನ ಮಾಜಿ ಅಧ್ಯಕ್ಷ ಶ್ರೀನಿವಾಸ ರಾವ್ ಅವರ ಸಹೋದರರಾಗಿದ್ದಾರೆ. ಉದ್ಯಮಿಯಾಗಿದ್ದ ಇವರು ಪತ್ನಿ ಹಾಗೂ ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.