ಬೆಳ್ತಂಗಡಿ, ಡಿ.29: ಮನುಜ ಕುಲದಲ್ಲಿ ಜನಸಿದ ನಾವೆಲ್ಲರೂ ವಿಶ್ವಮಾನವರೆ ಜಾತಿಯ ಎಲ್ಲೆ ಮೀರಿ ಮಾನವೀಯತೆಯ ಗುಣದೊಂದಿಗೆ ಬಾಳಬೇಕೆಂದು ಕುವೆಂಪು ನೀಡಿರುವ ಸಂದೇಶ ಸಾರ್ವಕಾಲಿಕ ಎಂದು ತಹಶೀಲ್ದಾರ್ ಪೃಥ್ವಿ ಸಾನಿಕಮ್ ಹೇಳಿದರು.
ತಾಲೂಕು ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಡಿ.29 ರಂದು ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಹಮ್ಮಿಕೊಂಡ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಹುಟ್ಟಿದಂದಿನಿಂದ ವಿಶ್ವ ಮಾನವನಾಗಿಯೇ ಇರುತ್ತಾನೆ. ವಿಶ್ವದಲ್ಲಿ ಜನಸಿದಾತ ವಿಶ್ವ ಮಾನವನೇ, ಆದರೆ ಜನನದ ಅರ್ಥ ಮತ್ತು, ನಮ್ಮ ಕರ್ತವ್ಯವನ್ನು ಪೂರೈಸಿದಲ್ಲಿ ಪರಿಸರ ನಮಗೆ ನೀಡಿರುವ ಅವಕಾಶವನ್ನು ಬಳಸಿ ಪರಿಸರದ ಆರಾಧಕನಾಗಿರುವ ಮೂಲಕ ಮನುಜ ಕುಲದ ಆರ್ಥವನ್ನು ತಿಳಿಯಬೇಕಾಗಿದೆ ಎಂದು ಹೇಳಿದರು.
ಉಪತಹಶೀಲ್ದಾರ್ ರವಿ ಕುಮಾರ್ ಓನನ್ನ ಚೇತನ ಹಾಡು ಹಾಡಿದರು.
ಸರ್ವೇ ಇಲಾಖೆ ಅಧಿಕಾರಿ ರೇಣುಕಾ ನಾಯ್ಕ್ ಹಾಗೂ ಉಪತಹಶೀಲ್ದಾರ್, ಎಲ್ಲ ಇಲಾಖೆ ಸಿಬಂದಿ ಉಪಸ್ಥಿತರಿದ್ದರು. ಸಿಬಂದಿ ಹೇಮಾ ಕಾರ್ಯಕ್ರಮ ನಿರೂಪಿಸಿದರು.