News Karnataka Kannada
Friday, May 10 2024
ಮಂಗಳೂರು

ಬೆಳ್ತಂಗಡಿ: ವಿಶ್ವಬೆನ್ನು ಹುರಿ ಅಪಘಾತ ದಿನಾಚರಣೆ

Belthangady: World Bennu Hurri Accident Day
Photo Credit : By Author

ಬೆಳ್ತಂಗಡಿ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಪುರ ಭವನದಲ್ಲಿ ವಿಶ್ವ ಬೆನ್ನು ಹುರಿ ಅಪಘಾತ ದಿನಾಚರಣೆಯನ್ನು ಸೇವಾಭಾರತಿ(ರಿ) ಕನ್ಯಾಡಿ ಮತ್ತು ರೋಟರಿ ಕ್ಲಬ್ ಕೊಪ್ಪ ಇದರ ಸಹಯೋಗದೊಂದಿಗೆ ಆಚರಿಸಲಾಯಿತು.

ಕೊಪ್ಪದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿಂದೆ ನೀಲೇಶ್ ದೇವಬಾ ಕಾರ್ಯಕ್ರಮವನ್ನು ಉದ್ಘಾಟಿಸಿದರು .ಸೇವಾಭಾರತಿಯ ಅಧ್ಯಕ್ಷ ಕೆ. ವಿನಾಯಕ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಕಟಪುರ ಮಠದ ವ್ಯವಸ್ಥಾಪಕ ರಾಘವ, ಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷ ಎನ್‌.ಪಿ ಸುಕೇಶ್, ರೋಟರಿ ಕ್ಲಬ್ ನ ಕಾರ್ಯದರ್ಶಿ ಡಾ.ಎಚ್. ಉದಯಶಂಕರ್, ಝೋನಲ್ ಲೆಫ್ಟಿನೆಂಟ್ ರಮೇಶ್ ಎಂ. ಆರ್ , ರೋಟರಿ ಸದಸ್ಯರುಗಳಾದ ರೇಖಾ ಉದಯ ಶಂಕರ್, ನಾಗರಾಜ್ ಪ್ರಸಾದ್, ರಾಘವೇಂದ್ರ ಭಟ್, ಸೇವಾ ಭಾರತಿಯ ಸಿಬ್ಬಂದಿಗಳಾದ ಆಶ್ರೀತ್ ಸಿ.ಪಿ,ಚರಣ್. ಎಂ, ಅಖಿಲೇಶ್ .ಎ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದಿವ್ಯಾಂಗರಿಗೆ ಮೆಡಿಕಲ್ ಕಿಟ್ ವಿತರಿಸಲಾಯಿತು. ರೋಟರಿ ಕ್ಲಬ್ ಸದಸ್ಯರು ಮುಂದಿನ ದಿನಗಳಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರ ಮನೆಗಳಿಗೆ ಭೇಟಿ ನೀಡಿ ಅವರಿಗೆ ನೀಡುವ ಸೇವೆಗಳ ಬಗ್ಗೆ ವಿಚಾರ ವಿನಿಮಯ ಮಾಡಲಾಯಿತು. ಕಾರ್ಯಕ್ರಮದ ನಂತರ ಕೊಪ್ಪ ಪುರಭವನದಿಂದ ಬಸ್ ಸ್ಟ್ಯಾಂಡ್ ವರೆಗೆ ಗಾಲಿ ಕುರ್ಚಿ ಜಾಥಾ ನಡೆಸಲಾಯಿತು.

ಈ ಜಾಥಾದಲ್ಲಿ ಎಲ್ಲಾ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗ ರು,ರೋಟರಿ ಕ್ಲಬ್ ನ ಸದಸ್ಯರು, ಕರ್ನಾಟಕ ಪಬ್ಲಿಕ್ ಸ್ಕೂ ಲ್ ನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಡಾ. ಉದಯ ಶಂಕರ್ ಸೆಪ್ಟೆಂಬರ್ 5 ರಂದು ಶಿಕ್ಷಕರದಿನಾಚರಣೆಯನ್ನು ಹೇಗೆ ಆಚರಿಸಲಾಗುತ್ತದೊ ಅದೇ ದಿನ ವಿಶ್ವ ಬೆನ್ನುಹುರಿ ಅಪ ಘಾತಕ್ಕೊಳಗಾದವರ ದಿನವೆಂದು ಆಚರಿಸಲಾಗುತ್ತದೆ.ಇವರಿಗೂ ಸಹ ಬದುಕಲು ಹಕ್ಕು ಇದೆ.ಇವರನ್ನು ನಿರ್ಲಕ್ಷ್ಯ ಮಾಡದೆ ಸಂಘ ಸಂಸ್ಥೆಗಳು ಸಹಾಯ ಹಸ್ತನೀಡಬೇಕೆಂದು ಹೇಳಿದರು. ಶಕಟಪುರ ಮತ್ತು ರೋಟರಿ ವತಿಯಿಂದ ಸೇವಾಧಾಮಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು