ಬೆಳ್ತಂಗಡಿ: ನಗರದ ರಿಕ್ಷಾ ಪಾರ್ಕಿಂಗ್ ಬಳಿ ನ.7 ರಂದು ಕಾಣಿಸಿಕೊಂಡಿದ್ದ ಹೊಂಡದ ದುರಸ್ತಿಯನ್ನು ಪಟ್ಟಣ ಪಂಚಾಯತ್ ವತಿಯಿಂದ ಮಂಗಳವಾರ ನಿರ್ವಹಿಸಲಾಯಿತು.
ಸ್ಥಳಕ್ಕೆ ಭೇಟಿ ನೀಡಿದ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ಮುಖ್ಯಾಧಿಕಾರಿ ರಾಜೇಶ್ ಕೆ, ಇಂಜಿನಿಯರ್ ಮಹಾವೀರ ಆರಿಗ ಅವರು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಂಡರು.
ರಸ್ತೆಯ ಅಡಿಯಿಂದ ತ್ಯಾಜ್ಯ ನೀರು ಹರಿಯುವ ಒಳಚರಂಡಿ ಇದ್ದು, ಘನ ವಾಹನ ಸಂಚಾರದಿಂದಾಗಿ ಚರಂಡಿ ಮೇಲೆ ಅಳವಡಿಸಿದ ಕಾಂಕ್ರೀಟ್ ಸ್ಲಾಬ್ ಕುಸಿತವಾಗಿರುವ ಹಿನ್ನೆಲೆಯಲ್ಲಿ ಈ ಹೊಂಡ ಉಂಟಾಗಿದೆ ಎಂದು ಇಂಜಿನಿಯರ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮುಖ್ಯಾಧಿಕಾರಿ ರಾಜೇಶ್ ಕೆ ಅವರು, ತುರ್ತು ದುರಸ್ತಿಗಾಗಿ ಪಟ್ಟಣ ಪಂಚಾಯತ್ ಕಡೆಯಿಂದ ಕ್ರಮ ಕೈಗೊಳ್ಳಲಾಗಿದೆ. ಅದಕ್ಕೆ ಬೇಕಾದ ಕಾರ್ಮಿಕರನ್ನು ವ್ಯವಸ್ಥೆ ಮಾಡಲಾಗುದ್ದು ಕ್ರೈನ್ ಮೂಲಕ ಸ್ಲಾಬ್ ಮೇಲೆತ್ತಿ ಅಗತ್ಯ ಬಿದ್ದಲ್ಲಿ ಬೇರೆಯೇ ಸ್ಲಾಬ್ ಅಥವಾ ಇದೇ ಸ್ಲಾಬ್ ಸರಿಯಿದ್ದರೆ ಅದನ್ನೇ ಮರು ಅಳವಡಿಸಿ ಶೀಘ್ರದಲ್ಲೇ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.