ಬೆಳ್ತಂಗಡಿ: ಕ್ರಿಸ್ಮಸ್ ಸಂದರ್ಭ ಏಸು ಕ್ರಿಸ್ತನ ಜನ್ಮ ವೃತ್ತಾಂತವನ್ನು ಪ್ರಸ್ತುತಪಡಿಸುವ ಗೋದಲಿಯನ್ನು ಕ್ರಿಶ್ಚಿಯನ್ ಬಾಂಧವರು ಅಲ್ಲಲ್ಲಿ ರಚಿಸುವುದು ವಾಡಿಕೆ. ಆದರೆ ಇಲ್ಲೊಂದು ಕಡೆ ಹಿಂದು ಮತ್ತು ಮುಸ್ಲಿಂ ಬಾಂಧವರು ಸೇರಿ ಬೃಹತ್ ಗೋದಲಿಯನ್ನು ನಿರ್ಮಿಸಿದ್ದಾರೆ.
ಮಡಂತ್ಯಾರು ಪೇಟೆಯಲ್ಲಿ ಸುಮಾರು 200 ಚದರ ಅಡಿ ವಿಸ್ತಾರದಲ್ಲಿ ಗೋದಲಿಯನ್ನು ಸಿದ್ಧಮಾಡಿದ್ದಾರೆ. ಅತ್ಯಂತ ಜನಾಕರ್ಷಣೆ ಪಡೆಯುತ್ತಿರುವ ಇದನ್ನು ನಿರ್ಮಿಸಿದ 12 ಮಂದಿ ಯುವಕರಿಗೇ ಈ ಪರಿಜನಮನ್ನಣೆ ಗಳಿಸಿದ್ದು ಅತ್ಯಂತ ಆಶ್ಚರ್ಯ ತಂದಿದೆ.
ಗೋದಲಿಗೆ ನೇಜಿ, ಹಸಿರು ಹುಲ್ಲು ಇತ್ಯಾದಿ ಪರಿಕರಗಳನ್ನು ಜೋಡಿಸಿಕೊಳ್ಳಲಾಗಿದೆ. ಆಡು ಕರುಗಳ ಬೊಂಬೆಗಳನ್ನು ಇಡದೆ ಜೀವಂತ ಪ್ರಾಣಿಗಳನ್ನು ಇಟ್ಟು ನೈಜತೆಗೆ ಸನಿಹ ಇರುವಂತೆ ಪರಿಶ್ರಮ ವಹಿಸಲಾಗಿದೆ. ಯುವಕರ ಶ್ರಮ ಜನಮನ್ನಣೆ ಗಳಿಸಿದೆ. ಇದನ್ನು ವೀಕ್ಷಿಸಲು ತಂಡೋಪತಂಡವಾಗಿ ಸಾರ್ವಜನಿಕರು ಬರುತ್ತಿದ್ದಾರೆ.