News Karnataka Kannada
Monday, May 06 2024
ಮಂಗಳೂರು

ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘ ಉದ್ಘಾಟನೆ

Belthangady Taluk Chitpavan Brahmin's Association Inaugurated
Photo Credit : By Author

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘವನ್ನು ಭಾನುವಾರ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಶ್ರೀರಾಮ ಕೃಷ್ಣ ಸಭಾ ಭವನದಲ್ಲಿ ಹಿರಿಯ ಪುರೋಹಿತ ಸೂಳಬೆಟ್ಟು ಪದ್ಮನಾಭ ಜೋಶಿ ಉದ್ಘಾಟಿಸಿ, ಪದಗ್ರಹಣ ನೆರವೇರಿಸಿದರು.

ಅತಿಥಿಯಾಗಿದ್ದ ಸಾಹಿತಿ ವಿಜಯ ವಿಷ್ಣು ಡೋಂಗ್ರೆ ಮಾತನಾಡಿ, ನಮ್ಮ ಚಿತ್ಪಾವನ ವಿಚಾರ,ಸಂಸ್ಕೃತಿ, ತ್ಯಾಗ, ಶೌರ್ಯಗಳನ್ನು ಸಂಘಟನೆಯ ಮೂಲಕ ಪ್ರಚುರಪಡಿಸಬೇಕು. ಹೊಸ ಚಿಂತನೆಗಳೊಂದಿಗೆ ಚಿಕ್ಕ ಗುಂಪುಗಳು ಬೃಹತ್ ಶಕ್ತಿಯಾಗಿ ಬೆಳೆದು ಸಾಮಾಜಿಕ ಕಳಕಳಿಯ ಕೆಲಸಗಳು ನಡೆಯವಂತಾಗಬೇಕು. ನಮ್ಮ ಹಿರಿಯರ ಪರಂಪರೆಯಲ್ಲಿ ಮುಂದುವರಿದು ಅವರ ಚಿಂತನೆಗಳಿಗೆ ಪೂರಕವಾಗಿ ರಾಷ್ಟ್ರದ ಅಭಿವೃದ್ದಿಯ ಹೆಜ್ಜೆಯಲ್ಲಿ ಸಾಗಬೇಕು ಎಂದರು.

ಹಿರಿಯ ಪತ್ರಕರ್ತ ಶ್ರೀಕರ ಮರಾಠೆ ಮಾತನಾಡಿ ಇಂದು ನಡೆಯುತ್ತಿರುವ ಕಲಬೆರಕೆ ಸಂಸ್ಕೃತಿಯನ್ನು ಮಟ್ಟ ಹಾಕಿ ನಮ್ಮ ಸಂಸ್ಕೃತಿಗೆ ಅನುಗುಣವಾಗಿ ನಡೆಯಬೇಕು.ಪರಂಪರೆಯ ಅರಿವಿನೊಂದಿಗೆ ಸರಳತೆ, ಸಜ್ಜನಿಕೆಯ ಜೀವನ ನಡೆಸ ಬೇಕು. ಸಂಘಗಳನ್ನು ಕಟ್ಟುವವರಲ್ಲಿ ಸಮಾಜ ಸೇವೆಯ ಧ್ಯೇಯ ಇರಬೇಕು ಎಂದರು.

ನಿವೃತ್ತ ಶಿಕ್ಷಕ ಶ್ರೀ ರಾಮ ದಾಮ್ಲೆ, ಸಂಘದ ಅಧ್ಯಕ್ಷ ತ್ರಿವಿಕ್ರಮ ಕೇಳ್ಕರ್, ಪ್ರಧಾನ ಕಾರ್ಯದರ್ಶಿ ನಾರಾಯಣ ಫಡಕೆ ಮುಂಡಾಜೆ ಉಪಸ್ಥಿತರಿದ್ದರು. ಉಪಾಧ್ಯಕ್ಷ ಡಾ. ಶಶಿಧರ ಡೊಂಗ್ರೆ ಸ್ವಾಗತಿಸಿದರು. ನ್ಯಾಯವಾದಿ ಶೈಲೇಶ್ ಠೋಸರ್ ಹಾಗೂ ಜೊತೆ ಕಾರ್ಯದರ್ಶಿ ರಶ್ಮಿ ಪಟವರ್ಧನ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ವರದ ಶಂಕರ್ ದಾಮ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ವೇಣು ಗೋಪಾಲ ಗೋಖಲೆ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು