ಬೆಳ್ತಂಗಡಿ: ಗ್ರಾಮೀಣ ಕ್ರೀಡಾಕೂಟಗಳು ಹಳ್ಳಿಗಳಲ್ಲಿರುವ ವಿಶಿಷ್ಟ ಪ್ರತಿಭೆಗಳ ಅನಾವರಣದ ವೇದಿಕೆಯಾಗಿದೆ. ಅವರ ಭವಿಷ್ಯಕ್ಕೆ ಅಡಿಪಾಯ ನಿರ್ಮಿಸಲು ಸಹಕಾರಿ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ನಾವೂರು ಗ್ರಾ.ಪಂ. ಸಹಕಾರದಲ್ಲಿ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಹುಣ್ಸೆಕಟ್ಟೆಯಲ್ಲಿ ಕ್ರೀಡಾಂಗಣ ನಿರ್ಮಾಣವಾಗಲಿದ್ದು ಇದು ಯುವ ಜನತೆಗೆ ವರದಾನವಾಗಲಿದೆ. ಈ ಸುಸಜ್ಜಿತ ಕ್ರೀಡಾಂಗಣ ಹೆಚ್ಚಿನ ಸೌಲಭ್ಯಗಳೊಂದಿಗೆ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಿದೆ. ಕ್ರೀಡಾ ಸ್ಪೂರ್ತಿಯೊಂದಿಗೆ ಆಟೋಟಗಳಲ್ಲಿ ಪಾಲ್ಗೊಂಡು ಯಶಸ್ಸಿಗೆ ಪಾತ್ರರಾಗಬೇಕು ಎಂದು ಹೇಳಿದರು.
ಎಂ ಎಲ್ ಸಿ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ ಶಾರೀರಿಕ ಹಾಗೂ ಮಾನಸಿಕ ಸ್ಫೂರ್ತಿಗೆ ಕ್ರೀಡೆಗಳು ಮೂಲ. ಗೆಲುವಿನ ಬಗ್ಗೆ ಯೋಚಿಸದೆ ಇದರಲ್ಲಿ ಪಾಲ್ಗೊಂಡು ಒಂದೊಮ್ಮೆ ಸೋಲು ಬಂದರು ಕಠಿಣ ಪರಿಶ್ರಮದ ಮೂಲಕ ಭವಿಷ್ಯದಲ್ಲಿ ಗೆಲುವಾಗಿ ಪರಿವರ್ತಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು.
ನಾವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ ಗೌಡ, ಬಂಗಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲಿಯಾನ್, ಬಿಇಒ ಎಚ್.ಎಸ್. ವಿರೂಪಾಕ್ಷಪ್ಪ, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು,ನವೋದಯ ಯುವಕ ಮಂಡಲದ ಅಧ್ಯಕ್ಷರಾದ ಹರೀಶ್ ನಾವೂರು ಉಪಸ್ಥಿತರಿದ್ದರು.
ಉಜಿರೆ ಗ್ರಾಪಂ. ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರೂಪಿಸಿದರು.ತಾಪಂ ಇಒ ಕುಸುಮಾಧರ ಸ್ವಾಗತಿಸಿದರು.ತಾಲೂಕು ಪಂಚಾಯಿತಿ ವತಿಯಿಂದ ನಡೆದ ಕಾರ್ಯಕ್ರಮಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳ್ತಂಗಡಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನವೋದಯ ಯುವಕ ಮಂಡಲ ನಾವೂರು,ಗ್ರಾಪಂ ನಾವೂರು, ಸ.ಹಿ.ಪ್ರಾ. ಶಾಲೆ ನಾವೂರು ಸಹಭಾಗಿತ್ವ ನೀಡಿದವು.
ಈ ಕಾರ್ಯಕ್ರಮದಲ್ಲಿ ಕಬಡ್ಡಿ ಕ್ರೀಡಾಂಗಣ ಉದ್ಘಾಟನೆ ಯನ್ನು ತಾಲೂಕ್ ಪಂಚಾಯತ್ ಇಒ ಕುಸುಮದಾರ ಇವರು, ನಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ತಾಲೂಕ್ ಪಂಚಾಯತಿ ನ ಮೆನೇಜರ್ ಪ್ರಶಾಂತ್, ನವೋದಯ ಮಂಡಲದ ಅಧ್ಯಕ್ಷರ ಹರೀಶ್ ನಾವೂರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕರಾದ ಸಾಂತಪ್ಪ, ತಾಲೂಕು ಪಂಚಾಯತಿನ ಅಧಿಕಾರಿ ವರ್ಗ, ಗ್ರಾಮ ಪಂಚಾಯತಿನ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು