ಬೆಳ್ತಂಗಡಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ 2022-24 ನೇ ಸಾಲಿಗೆ ರಾಜ್ಯಾಧ್ಯಕ್ಷರಾಗಿ ರಾಜಣ್ಣ ಮೂ. ಕೊರವಿ ಆಯ್ಕೆಯಾಗಿರುತ್ತಾರೆ.
ಹುಬ್ಬಳ್ಳಿ ಧಾರವಾಡದ ಮಹಾನಗರ ಪಾಲಿಕೆಯ ಸದಸ್ಯರಾದ ಇವರು ವೃತ್ತಿಯಲ್ಲಿ ವಕೀಲರು ಸಮಾಜದ ವಿವಿಧ ಸಂಘಟನೆಯಲ್ಲಿ ಗುರುತಿಸಲ್ಪಟ್ಟವರು.
ಉತ್ತರ ಕರ್ನಾಟಕ ಛೇಂಬರ್ ಆಫ್ ಕಾಮರ್ಸ್ ಇದರ ಅಧ್ಯಕ್ಷರಾಗಿ ಜಲ ಮಂಡಳಿ ನಿರ್ಮಿತಿ ಕೇಂದ್ರದ ಅಧ್ಯಕ್ಷರಾಗಿ, ಕಳಸ ಬಂಡೂರ ನಾಲ ಹೋರಾಟದ ಮುಖಂಡರಾಗಿ ಕಳೆದ 7 ವರ್ಷಗಳಿಂದ ಧಾರವಾಡದ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.