ಬೆಳ್ತಂಗಡಿ: ಇಲ್ಲಿನ ಅಳದಂಗಡಿ ಹಾನಿಂಜ ಸಾಲು ಕಾಯೇರು ಶ್ರೀ ಮಹಮ್ಮಾಯಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು ನೂತನ ದೇವಾಲಯದ ಶಿಲಾಮಯ ಮುಖದ್ವಾರ ಪ್ರತಿಷ್ಠೆ-ಧಾರ್ಮಿಕ ಸಭಾ ಕಾರ್ಯಕ್ರಮ-ಸೇವಾಕರ್ತರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.
ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೋಕ್ತೆಸರ ಶಿವಪ್ರಸಾದ ಅಜಿಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಕ್ಷೇತ್ರವು ಪಾರಂಪರಿಕ ಐತಿಹ್ಯ ಹೊಂದಿದೆ. ಎಲ್ಲರ ಸಹಭಾಗಿತ್ವ ಉತ್ತಮವಾಗಿದ್ದಾಗ ಜೀರ್ಣೋದ್ಧಾರ ಕಾರ್ಯ ಸುಲಭವಾಗುವುದು’ ಎಂದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಭಾಶ್ಚಂದ್ರ ರೈ ಪಡ್ಯೋಡಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ‘ಜೀರ್ಣೋದ್ಧಾರ ಸಮಿತಿ, ಗ್ರಾಮಸ್ಥರು, ಊರ ಪರವೂರ ದಾನಿಗಳು ಕ್ಷೇತ್ರದ ಬಗೆಗೆ ವಿಶೇಷ ಅರಿವು ಕಾಳಜಿ ಹೊಂದಿರುವುದರಿಂದ ನಿರೀಕ್ಷೆಯಂತೆ ಜೀರ್ಣೋದ್ಧಾರ ಅಭಿವೃಧ್ಧಿ ಕಾರ್ಯಗಳು ನಿರ್ವಿಘ್ನವಾಗಿ ಸುಸೂತ್ರವಾಗಿ ಸಾಗುತ್ತಿದೆಎಂದರು.
ವೇದಿಕೆಯಲ್ಲಿ ಕ್ಷೇತ್ರದ ವ್ಯವಸ್ಥಾಪಕರಾದ ಸೋಮನಾಥ ಹೆಗ್ಡೆ,ಉಧ್ಯಮಿ ಶೇಖರ ದೇವಾಡಿಗ ಪಾಲಬೆ ಇದ್ದರು. ಇದೇ ಸಂದರ್ಭ ಶಿಲಾಮಯ ಮುಖದ್ವಾರವನ್ನು ಕ್ಷೇತ್ರಕ್ಕೆ ಸೇವಾರೂಪದಲ್ಲಿ ಒದಗಿಸಿದ ರೂಪಲತಾ-ವಿನೋದ್ ಎಸ್ ದೇವಾಡಿಗ ದಂಪತಿಗಳನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಶಿಕಾಂತ್ ನಾಯಕ್,ಆನಂದ ಪೂಜಾರಿ ನೀರಲ್ಕೆ,ಜಗದೀಶ ರೈ,ಧರ್ಣಪ್ಪ ಪೂಜಾರಿ ದೋರಿಂಜ,ಹರೀಶ್ ಆಚಾರ್ಯ ಮಿತ್ತರೋಡಿ,ಪ್ರಶಾಂತ್ ಶೆಟ್ಟಿ ಬೊಳ್ಳಿಮಾರ್,ಕೃಷ್ಣಪ್ಪ ಪೂಜಾರಿ ಬಿಕ್ಕಿರ,ಗುರುಪ್ರಸಾದ್ ಹೆಗ್ಡೆ,ಜಿನ್ನಪ್ಪ ಪೂಜಾರಿ ಕಾಪಿನಡ್ಕ,ಕೊರಗಪ್ಪ ಶೆಟ್ಟಿ ಕಟ್ಟಪುಣಿ, ವಿಠಲದಾಸ್ ನೀರಲ್ಕೆ,ಸದಾಶಿವ ಶೆಟ್ಟಿ ಹೊಸಮನೆ,ಮುರಳಿ ದೇವಾಡಿಗ,ಪ್ರಸಾದ್ ನೀರಲ್ಕೆ,ಶ್ರೀಧರ ಮಡಿವಾಳ,ವಸಂತ ಪೂಜಾರಿ ನೀರಲ್ಕೆ,ನಿತೇಶ್ ಹೆಗ್ಡೆ,ಸುಂದರ ಪೂಜಾರಿ ನೀರಲ್ಕೆ,ಚಿತ್ರೇಶ್ ಮತ್ತಿತರ ಪ್ರಮುಖರ ಸಹಿತ ಭಕ್ತಾದಿಗಳು ಇದ್ದರು.
ಸದಾನಂದ ಪೂಜಾರಿ ಉಂಗಿಲಬೈಲು ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಸಂದೀಪ್ ಎಸ್ ನೀರಲ್ಕೆ ಕ್ಷೇತ್ರದ ವಿಜ್ಞಾಪನಾ ಪತ್ರವನ್ನು ವಾಚಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಹರೀಶ್ ದೇವಾಡಿಗರವರು ವಂಧನಾರ್ಪಣೆ ಸಲ್ಲಿಸಿದರು.
ಮಹಾಪೂಜೆಯ ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯು ನೆರವೇರಿತು.