News Karnataka Kannada
Sunday, May 19 2024
ಮಂಗಳೂರು

ಬೆಳ್ತಂಗಡಿ: ಜನತಾದರ್ಶನ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ದಿನೇಶ್ ಗುಂಡುರಾವ್

Belthangady: Minister Dinesh Gundu Rao inaugurates Janata Darshan programme
Photo Credit : News Kannada

ಬೆಳ್ತಂಗಡಿ: ಸರಕಾರದ ಕಾರ್ಯಕ್ರಮಗಳು ತಳಮಟ್ಟದಲ್ಲಿ ಹೇಗೆ ಅನುಷ್ಟಾನವಾಗುತ್ತಿವೆ ಎಂದು ತಿಳಿಯಲು ಮತ್ತು ಜನರ ಸಮಸ್ಯೆಗಳನ್ನು ತ್ವರಿತವಾಗಿ ನಿವಾರಿಸಬೇಕು ಎಂಬ ಉದ್ದೇಶದಿಂದ ಜನತಾದರ್ಶನ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಸಚಿವ ದಿನೇಶ್ ಗುಂಡುರಾವ್ ಹೇಳಿದರು.

ಅವರು ಶನಿವಾರ ಲಾಯಿಲ ಸಂಗಮ ಸಭಾಭವನದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರು ಕಚೇರಿಯಿಂದ ಕಚೇರಿಗೆ ಅಲೆದಾಟ ಮಾಡಿದಾಗ ಅವರ ಕೆಲಸಗಳು ಅಗದಿದ್ದರೆ ಅವರ ಮನಸ್ಸಿಗೆ ನೋವಾಗುತ್ತದೆ.ಜನರ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳುವುದು ಸರಕಾರದ ಉದ್ದೇಶ. ಅಧಿಕಾರಿಗಳು ಅಧಿಕಾರ ಚಲಾಯಿಸಲು ಅಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅದಿಕಾರಿಗಳಾಗಬೇಕು ಎಂದರು.

ಜನರಿಗೆ ಸಾಮಾಜಿಕ ನ್ಯಾಯ ಕೊಡಲು,ಜನರಿಗೆ ಸರಕಾರದ ಯೋಜನೆ ತಲುಪಿಸಬೇಕು. ಗುಟಮಟ್ಡದ ಕಾಮಗಾರಿ ನಡೆಯಬೇಕು , ಭ್ರಷ್ಟಾಚಾರ ತಡೆಯಲು ಸರಕಾರ ಉದ್ದೇಶವಾಗಿದೆ. ಸರಕಾರದ ಗ್ಯಾರಂಟಿಗಳನ್ಬು ಕೊಟ್ಟಮಾತಿನಂತೆ ಜನರಿಗೆ ನೀಡುತ್ತೆವೆ. ಉಚಿತ ಗ್ಯಾರಂಟಿಯ ಪರಿಣಾಮ ಮುಂದಿನ ಮೂರು ವರ್ಷದ ಬಳಿಕ ತಿಳಿಯಬಹುದು. ರಾಜ್ಯದಲ್ಲಿ ಬಡತನ ನಿರ್ಮೂಲನವಾಗಬೇಕು ಎಂಬುದು ಸರಕಾರದ ಉದ್ದೇಶ.ಅದಕ್ಕಾಗಿ ಯಾವುದೇ ಜಾತಿ,ದರ್ಮದ ನೆಪ ಇರದೆ ಉಚಿತ ಕೊಡುಗೆ ನೀಡಲಾಗುತ್ತಿದೆ ಎಂದರು. ಹಕ್ಕುಪತ್ರ, ಎಂಡೋ ಪೀಡಿತರಿಗೆ ಸೌಲಭ್ಯ ಸೇರಿದಂತೆ 374 ಮಂದಿಗೆ ವಿವಿಧ ಸೌಲಭ್ಯ ವಿತರಿಸಿದರು.

ಸಾರ್ವಜನಿಕರು ವಿವಿದ ಬೇಡಿಕೆಗಳಿಗೆ ಮನವಿ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ,ವಿದಾನ ಪರಿಷತ್ ಸದಸ್ಯರಾದ ಕೆ ಹರೀಶ್ ಕುಮಾರ್,ಪ್ರತಾಪ್ ಸಿಂಹ ನಾಯಕ್, ಲಾಯಿಲ ಗ್ರಾ ಪಂ ಅದ್ಯಕ್ಷ ಆಶಾ ಸಲ್ದಾನ, ದ.ಕ ಜಿಲ್ಲಾದಿಕಾರಿ ಮುಳೈ ಮುಗಿಲನ್, ಪುತ್ತುರು ಸಹಾಯಕ ಕಮಿಷನರ್ ಗಿರೀಶ್ ನಂದನ್,ಜಿ ಪಂ ಮುಖ್ಯಕಾರ್ಯನಿರ್ವಹಣಾದಿಕಾರಿ ಡಾ ಆನಂದ್, ಪ್ರಭಾರ ಅಪರ ಜಿಲ್ಲಾದಿಕಾರಿ ಮಾಣಿಕ್ಯ ಹಾಗು ವಿವಿಧ ಅದಿಕಾರಿಗಳು ಉಪಸ್ತಿತರಿದ್ದರು. ತಹಸೀಲ್ದಾರ್ ಸುರೇಶ್ ಕುಮಾರ್ ಸ್ವಾಗತಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು