News Karnataka Kannada
Thursday, May 02 2024
ಮಂಗಳೂರು

ಬೆಳ್ತಂಗಡಿ: ಉದಯಪುರದ ಹತ್ಯೆ ಖಂಡಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆ

Hindu Jagarana Vedike protests against udaipur killing
Photo Credit :

ಬೆಳ್ತಂಗಡಿ: ರಾಜಸ್ಥಾನದ ಉದಯಪುರದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಟೈಲರ್ ಕನ್ಹಯ್ಯಲಾಲ್ ಎಂಬವರ ಹತ್ಯೆಯ ಕೃತ್ಯ ಖಂಡಿಸಿ ವೇಣೂರು ಹಿಂದೂ ಜಾಗರಣ ವೇದಿಕೆ ವತಿಯಿಂದ ರವಿವಾರ ಇಲ್ಲಿಯ ಮುಖ್ಯಪೇಟೆಯಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಪುತ್ತೂರು ಜಿಲ್ಲಾ ಸಹ ಸಂಯೋಜಕ ನರಸಿಂಹ ಮಾಣಿ, ರಾಜಸ್ಥಾನದ ಉದಯಪುರದಲ್ಲಿ ನಡೆದ ಇಸ್ಲಾಂನ ಕ್ರೌರ್ಯ ಎಲ್ಲರನ್ನು ಬೆಚ್ಚಿಬೀಳುವಂತೆ ಮಾಡಿದೆ. ದೇಶದ ಪರವಾಗಿರುವವರನ್ನು, ದೇಶವನ್ನು ಪ್ರೀತಿ ಮಾಡುವವರನ್ನು, ದೇಶದ ಸಂಸ್ಕೃತಿ, ನೆಲವನ್ನು ಗೌರವಿಸುವವರ ಶಕ್ತಿಯನ್ನು ಧಮನ ಮಾಡುವ ಕಾರ್ಯ ನಡೆಯುತ್ತಿದೆ. ಉಗ್ರಗಾಮಿಗಳ ಈ ಕೃತ್ಯಗಳಿಗೆ ಮದರಸಗಳು ತರಬೇತಿ ನೀಡುತ್ತಿದ್ದು, ದೇಶದಲ್ಲಿರುವ ಹಿಂದೂ ವಿರೋಧಿ ಮದರಸಗಳನ್ನು ತಕ್ಷಣ ನಿಷೇಧ ಮಾಡುಬೇಕು, ಏಕರೂಪದ ಶಿಕ್ಷಣ ನೀತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ರಕ್ಷಣೆ ನೀಡದ ಕಾಂಗ್ರೆಸ್ ಸರಕಾರ ಜೀವಬೆದರಿಕೆ ಇದ್ದ ಕನ್ನಯ್ಯ ಲಾಲ್‌ಗೆ ರಾಜಸ್ತಾನ ಸರಕಾರ ರಕ್ಷಣೆ ನೀಡಿಲ್ಲ. ಈ ಹತ್ಯೆಗೆ ಕೇವಲ ಮುಸ್ಲಿಂ ಸಂಘಟನೆ ಮಾತ್ರವಲ್ಲ, ಅಲ್ಲಿನ ಕಾಂಗ್ರೆಸ್ ಸರಕಾರ ಕೂಡಾ ನೇರ ಹೊಣೆಯಾಗಿದೆ. ರಾಜಸ್ತಾನದ ಕಾಂಗ್ರೆಸ್ ಸರಕಾರವನ್ನು ತಕ್ಷಣ ವಜಾ ಗೊಳಿಸಬೇಕು. ಉಗ್ರಗಾಮಿಗಳಿಗೆ ಗಲ್ಲುಶಿಕ್ಷೆಯನ್ನು ವಿಧಿಸಬೇಕು, ಕನ್ನಯ್ಯ ಕುಟುಂಬಕ್ಕೆ ರೂ. ೧ ಕೋಟಿ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು.

ವಿ.ಹಿಂ.ಪ. ಜಿಲ್ಲಾ ಸಂಯೋಜಕ ಜಗದೀಶ್ ನೆತ್ತರಕೆರೆ, ಜಿಲ್ಲಾ ಪ್ರಮುಖ್ ಪ್ರಶಾಂತ್ ಕೆಂಪುಗುಡ್ಡೆ, ರಕ್ಷಿತ್ ಸಾವ್ಯ, ತಾಲೂಕು ಸಂಯೋಜಕ ನಿರಂಜನ್ ವೇಣೂರು, ಪರಿವಾರ ಸಂಘಟನೆಯ ರಕ್ಷಿತ್ ಬಜಿರೆ, ಗ್ರಾ.ಪಂ. ಅಧ್ಯಕ್ಷರುಗಳಾದ ನೇಮಯ್ಯ ಕುಲಾಲ್, ಜನಾರ್ಧನ ಪೂಜಾರಿ, ವಿವಿಧ ಗ್ರಾ.ಪಂ. ಸದಸ್ಯರು, ಪರಿವಾರ ಸಂಘಟನೆಗಳ ಕಾರ್ಯಕರ್ತರು, ಮತ್ತಿತರರು ಉಪಸ್ಥಿತರಿದ್ದರು.

ಉಮೇಶ್ ನಡ್ತಿಕಲ್ಲು ಪ್ರಸ್ತಾವಿಸಿದರು. ವಿ.ಹಿಂ.ಪ. ಜಿಲ್ಲಾ ಪ್ರಮುಖ್ ಕಿರಣ್ ಶೆಟ್ಟಿ ಮೂರ್ಜೆ ಸ್ವಾಗತಿಸಿ, ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು