ಬೆಳ್ತಂಗಡಿ: ಮೇ 28 ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜಾ ಅವರು ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದರೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಳ್ಳುತ್ತೇವೆ ಎಂದು ಅವರ ಅಭಿಮಾನಿಗಳು ಹರಕೆ ಹೊತ್ತಿದ್ದರು. ಆ ಪ್ರಯುಕ್ತ ವಿಟ್ಲ ಸಾಲೆತ್ತೂರಿನ ವಿಶ್ವನಾಥ ಗೌಡ ಮತ್ತು ಶರತ್ ಅವರು ಪಾದಯಾತ್ರೆಯನ್ನು ಪೂರೈಸಿ ಮಂಜುನಾಥ ಸ್ವಾಮಿಯ ದರ್ಶನ ಮಾಡಿ ಶಾಸಕರಾದ ಹರೀಶ್ ಪೂಂಜಾ ಅವರನ್ನು ಭೇಟಿಯಾದರು.
ಈ ಸಂದರ್ಭದಲ್ಲಿ ಲೋಕೇಶ್ ನಾವುಳೆ, ಮನೋಜ್ ನಾವುಳೆ, ದಿನೇಶ್ ಖಂಡಿಗ ಉಪಸ್ಥಿತರಿದ್ದರು.