ಬೆಳ್ತಂಗಡಿ: ರಾಜ್ಯ ಸಭೆಗೆ ಶಿಫಾರಸುಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರನ್ನು ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ವತಿಯಿಂದ ಭೇಟಿ ಮಾಡಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆಯಲ್ಲಿ ತೊಡಗಿಕೊಂಡಿ ರುವ ಅವರ ಹೆಸರನ್ನು ರಾಷ್ಟ್ರಪತಿ ರಾಜ್ಯಸಭೆ ಗೆ ಶಿಫಾರಸು ಮಾಡಿರುವುದು ನಾಡಿಗೆ ಹೆಮ್ಮೆಯ ವಿಚಾರ ಎಂದು ಅಭಿನಂದಿಸಲಾಯಿತು.
ಗೆಜ್ಜೆಗಿರಿಯಲ್ಲಿ ಔಷಧೀಯ ವನ, ಗಿಡ ಮೂಲಿಕೆ ಮತ್ತು ಆಯುರ್ವೇದ ಔಷಧ ಉತ್ಪಾದನೆ, ಯಕ್ಷಗಾನ ಮೇಳ, ಮುಂತಾದ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಕ್ಷೇತ್ರಾಡಳಿತ ಸಮಿತಿಯ ಜೊತೆ ವಿಚಾರ ವಿನಿಮಯ ನಡೆಸಿದರು. ಜಿಲ್ಲೆಯ ಹೆಸರಾಂತ ಪುಣ್ಯ ಕ್ಷೇತ್ರವಾಗಿರುವ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕಾರ್ಯ ಚಟುವಟಿಕೆ ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಯ ಅಧ್ಯಕ್ಷರಾದ ಪೀತಾಂಬರ ಹೆರಾಜೆ, ಗೌರವಾಧ್ಯಕ್ಷ ಜಯಂತ ನಡುಬೈಲ್, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಉಪಾಧ್ಯಕ್ಷ ರವಿಪೂಜಾರಿ ಚಿಲಿಂಬಿ, ಕಾರ್ಯಕಾರಿ ಸದಸ್ಯರಾದ ಸೂರ್ಯಕಾಂತ್ ಜಯ ಸುವರ್ಣ, ನವೀನ್ ಸುವರ್ಣ, ವಕ್ತಾರ ರಾಜೇಂದ್ರ ಚಿಲಿಂಬಿ, ಪ್ರಮುಖರಾದ ಶೇಖರ ಬಂಗೇರ, ಜನಾರ್ಧನ ಪೂಜಾರಿ ಪಡುಮಲೆ, ನಿತ್ಯಾನಂದ ನಾವರ, ನಾರಾಯಣ ಪೂಜಾರಿ ಮಚ್ಚಿನ, ಹಾಗೂ ಯಕ್ಷಗಾನ ಮೇಳದ ನಿತಿನ್ ಕುಮಾರ್ ತೆಂಕಕಾರಾಂದೂರು, ಗಿರೀಶ್ ರೈ ಕಕ್ಕೆಪದವು, ಸುರೇಶ್ ಪೂಜಾರಿ, ಶಶಿಕಿರಣ್ ಕಾವು, ಜಗದೀಶ್ ಕಜೆಕಾರ್, ವಸಂತ್ ಸುವರ್ಣ, ಮುಂತಾದವರು ಉಪಸ್ಥಿತರಿದ್ದರು.