News Karnataka Kannada
Saturday, April 27 2024
ಮಂಗಳೂರು

ಬೆಳ್ತಂಗಡಿ: ಮಿನಿ ವಿಧಾನಸೌಧದ ಎದುರು ರೈತರ ಧರಣಿ ಸತ್ಯಾಗ್ರಹ

Belt
Photo Credit : By Author

ಬೆಳ್ತಂಗಡಿ: ಕಣಿಯೂರು ಗ್ರಾಮದ ನಾರಾಯಣ ರಾವ್ ಕೊಲ್ಲಾಜೆ ಹಾಗೂ ಇತರರ ಕುಮ್ಕಿ ಜಮೀನಿನಲ್ಲಿ ತಹಶೀಲ್ದಾರರು ನಡೆಸಿದ ಅಳತೆಯ ಹಾಗೂ ಮೇಜಣಿಯ ಯಥಾವತ್ ವರದಿಯನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೂತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಅವರು ಅಧಿಕಾರಿಗಳ ನೆರವಿನೊಂದಿಗೆ ರೈತರ ಕುಮ್ಕಿ ಜಮೀನನ್ನು ಅಕ್ರಮವಾಗಿ ರೈತೇತರರಿಗೆ ಹಂಚಿಕೆ ಮಾಡಿದೆ ಈ ಬಗ್ಗೆ ತಹಶೀಲ್ದಾರರು ನಢಸಿರುವ ಮೇಜಣಿಯ ಯಥವತ್ ಪ್ರತಿಯನ್ನು ಕೇಳಿದರೆ ಅದನ್ನು ನೀಡಲು ತಾಲೂಕು ಆಡಳಿತ ಮುಂದಾಗುತ್ತಿಲ್ಲ ತಕ್ಷಣವೆ ಈ ಬಗ್ಗೆ ಮಾಹಿತಿ ನೀಡಬೇಕು ತಪ್ಪು ವರದಿಗಳನ್ನು ನೀಡಿ ಇನ್ನಷ್ಟು ಅಕ್ರಮಗಳಿಗೆ ಕಾರಣವಾಗುವ ಅವಕಾಶವಿದೆ ಎಂದರು.

ಕೃಷಿಕರ ಕುಮ್ಕಿ ಜಮೀನನ್ನು ಯಾವುದೇ ಕಾರಣಕ್ಕೂ ಇತರರಿಗೆ ಹಂಚಲು ಅವಕಾಶ ನೀಡುವುದಿಲ್ಲ ಈಬಗ್ಗೆ ಮಾಡಿರುವ ಆದೇಶಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರುಗಳಾದ ಓಸ್ವಾಲ್ಡ್ ಫೆರ್ನಾಂಡಿಸ್, ಆದಿತ್ಯ ನಾರಾಯಣ್, ಸುರೇಂದ್ರ, ದಲಿತ ಮುಖಂಡ ಶೇಖರ ಲಾಯಿಲ ಹಾಗೂ ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು