ಬೆಳ್ತಂಗಡಿ: ಮಂಗಳೂರು ಕೊಡಗು ರಾಷ್ಟ್ರೀಯ ಹೆದ್ದಾರಿ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರಾಗಿ ಪದೋನ್ನತಿ ಹೊಂದಿದ ಶಿವಪ್ರಸಾದ ಅಜಿಲ ಅವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಳದಂಗಡಿ ವಲಯದ ವತಿಯಿಂದ ಗೌರವ ಯುತವಾಗಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಗುರುವಾಯನಕೆರೆ ಯೋಜನಾಧಿಕಾರಿ ಶ್ರೀ ಯಶವಂತ್ ವಲಯ ಮೇಲ್ವಿಚಾರಕಿ ಸುಮಂಗಲ ಒಕ್ಕೂಟ ವಲಯ ಅಧ್ಯಕ್ಷರಾದ ಪ್ರತಾಪ್ ಕಲಾಜೆ ಬಡಗಕಾರಂದೂರು ಎಬಿ ಒಕ್ಕೂಟಗಳ ಅಧ್ಯಕ್ಷರು ಗಳಾದ ಮಂಜುನಾಥ ಆಚಾರ್ಯ ಹಾಗೂ ಹರೀಶ್ ಆಚಾರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಶ್ರೀಕಾಂತ್ ಹಾಗೂ ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.