ಬೆಳ್ತಂಗಡಿ: ಅಂಡಿಂಜೆ ಗ್ರಾಮದ ಇಂದ್ರಹಿತ್ಲು ಮನೆ ನಿವಾಸಿ ಪುರೋಹಿತ ಸತೀಶ್ ಹೆಬ್ಬಾರ್( ಮೆಹೆಂದಳೆ) ಅವರ ಪತ್ನಿ ಮಂಜುಳಾ ಯಾನೆ ಸುವರ್ಣ (54 ) ಮಂಗಳವಾರ ಗುರುವಾಯನಕೆರೆ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಕೆಲ ಕಾಲದಿಂದ ಅರ್ಬುದ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರು ಪುತ್ರ ಅಷ್ಟಾವಧಾನಿ ಸೂರ್ಯ ಹೆಬ್ಬಾರ್ ಅವರನ್ನು ಅಗಲಿದ್ದಾರೆ.