News Karnataka Kannada
Sunday, April 28 2024
ಮಂಗಳೂರು

ಬೆಳ್ತಂಗಡಿ: ಜ 7 ಕಾಂಗ್ರೆಸ್ ಪಕ್ಷದಿಂದ ಬ್ರಹತ್ ಪ್ರತಿಭಟನೆ

Blty
Photo Credit : By Author

ಬೆಳ್ತಂಗಡಿ: ಮುಗೆರಡ್ಕದಲ್ಲಿ ನಡೆಯುವ ಅಕ್ರಮ ಮರಳು ದಂದೆ,ಮತ್ರು 250 ಕೋಟಿ ವೆಚ್ಚದ ನೀರಾವರಿ ಯೋಜನೆಯಲ್ಲಿ ನಡೆಯುವ ಭ್ರಷ್ಟಾಚಾರ ಮತ್ತು ಸರಕಾರದ ಜನವಿರೋದಿ ನಡವಳಿಕೆಯ ವಿರುದ್ದ ಜ 7 ರಂದು ಮಿನಿ ವಿದಾನಸೌದದ ಎದುರು ಬ್ರಹತ್ ಪ್ರತಿಭಟನೆ ನಡೆಸಿ ಬಳಿಕ ಮೊಗೆರಡ್ಕವರೆಗೆ ವಾಹನ ಜಾಥಾ ನಡೆಸಿ ಅಲ್ಲಿನ ಅಕ್ರಮ ಮರಳುಗಾರಿಕೆ ಮತ್ತು ನೀರಾವರಿ ಕಾಮಗಾರಿಯಲ್ಲಿನ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.

ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪೆಟ್ರೋಲ್, ಡಿಸೇಲ್ ,ಗ್ಯಾಸ್ ಬೆಲೆ ಗಗನಕ್ಜೆ ಏರಿದೆ, ವಿಮಾನ ನಿಲ್ದಾಣ, ಕಾರ್ಖಾನೆ, ಬ್ಯಾಂಕ್ , ಎಲ್ ಐ ಸಿ , ಬಂದರುಗಳನ್ಬು ಖಾಸಗೀಕರಣ ಗೊಳಿಸುತ್ತಿದೆ ಸರಕಾರ, ಯುವಕರಿಗೆ ಉದ್ಯೋಗ ನೀಡುತ್ತಿಲ್ಲ, ಬೆಲೆಏರಿಕೆ ಯಿಂದ ರೈತರು ಕಂಗಾಲಾಗಿದ್ದಾರೆ.

ಇತ್ತಿಚೆಗೆ ಜವಾಬ್ದಾರಿಯುತ ಸಚಿವರು ಅಡಿಕೆ ಬೆಳೆ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿ ರೈತರನ್ಬು ದಾರಿ ತಪ್ಪಿಸಲು ಹೊರಟಿದ್ದಾರೆ. ರೈತರ ಮುಂದೆ ಸಚಿವರು ಕ್ಷಮೆಯಾಚಿಸಬೇಕು. ರೈತರು ಇಂತಹ ಮಾತಿಗೆ ಕಿವಿಗೊಡಬೇಡಿ. ಅಡಿಕೆಗೆ ಉತ್ತಮ ಬೆಲೆ ಸಿಗಲಿದೆ.ಅಡಿಕೆ ಬೆಳೆಸಲು ಹಿಂಜರಿಯಬೇಡಿ ಎಂದರು.

ಅನ್ಬ ಭಾಗ್ಯ ಯೋಜನೆಯಲ್ಲಿ ಅಕ್ಜೆ ಕಡಿತ ಮಾಡಿ ಬಡವರಿಗೆ ಅನ್ಯಾಯ ಮಾಡಿದ ಸರಕಾರ ಅವಶ್ಯ ದಿನ ಬಳಕೆ ವಸ್ತುಗಳ ಮೇಲೆ ಜಿ ಎಸ್ ಟಿ ದರ ವಿದಿಸಿ ಜನರಿಗೆ ಅನ್ಯಾಯಾಡಿದೆ.ಬಿ ಪಿ ಎಲ್ ಕಾರ್ಡ್ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ, ಜಾತಿ ದರ್ಮಗಳ ನಡುವೆ ಒಟಿಗಾಗಿ ವಿಷ ಬೀಜ ಬಿತ್ತುವ ಕಾರ್ಯ ತಾಲೂಕಿನಲ್ಲಿ ನಡೆಯುತ್ತಿದ್ದು ಇದರ ವಿರುದ್ದವೂ ಪ್ರತಿಭಟನೆ ನಡೆಸಲಿದ್ದೆವೆ ಎಂದರು.

ಜ 8 ರಿಂದ ನೇತ್ರಾವತಿ ಉಳಿಸಿ ನಡೆಯುವ ಪಾದಯಾತ್ರೆ ಬಗ್ಗೆ ಮಾಹಿತಿ ಇಲ್ಲ ಇದಕ್ಜೆ ನನ್ನ ಬೆಂಬಲವೂ ಇಲ್ಲ ಎಂದರು. ಮಾಜಿ ಸಚಿವ ಗಂಗಾದರ ಗೌಡ ಮಾತನಾಡಿ ಬಿಜೆಪಿ ಸರಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಜನರಿಗೆ ತಿಳಿಸುವ ಕಾರ್ಯ ಕಾಂಗ್ರೆಸ್ ಮಾಡುತ್ತಿದ್ದು ಜನರ ಬಳಿ ಇಂದಿರಾ ಗಾಂದಿ ರಥಯಾತ್ರೆ ಮೂಲಕ ಗ್ರಾಮ ಗ್ರಾಮಗಳಿಗೆ ತೆರಳಿ ಜನರಿಗೆ ಸರಕಾರದ ವೈಫಲ್ಯ ಗಳನ್ನು ತಿಳಿಸಲಿದ್ದೇವೆ ಎಂದರು.

ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ರಂಜನ್ ಗೌಡ,ಶೈಲೇಶ್ ಕುಮಾರ್,ನಗರ ಪಂಚಾಯತ್ ಸದಸ್ಯ ಜಗದೀಶ್, ಮುಖಂಡರುಗಳಾದ ಕೇಶವಗೌಡ ಬೆಳಾಲು,ಅಶ್ರಪ್ ನೆರಿಯ,ಅಬ್ದುಲ್ ರಹಿಮಾನ್ ಪಡ್ಪು,ರವಿ ಕೋಟ್ಯಾನ್,ಎಸಿ ಮ್ಯಾಥ್ಯೂ, ಶೋಬಾ ನಾರಾಯಣ ಗೌಡ,ಭರತ್ ಕುಮಾರ್,ರವಿ ,ನಾರಾಯಣ ಗೌಡ ಮುಂಡಾಜೆ,ಮೆಹಬೂಬ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು