ಬೆಳ್ತಂಗಡಿ: ಹೊಂಡಗಳಿಂದ ತುಂಬಿ ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ನಾಗರಿಕರೇ ಶ್ರಮದಾನದ ಮೂಲಕ ತೇಪೆ ಹಾಕುವ ಪರಿಸ್ಥಿತಿ ಬಂದೊದಗಿರುವುದು ವಿಪರ್ಯಾಸವಾಗಿದೆ.
ತಾಲೂಕಿನಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ತೀರ ಹದಗೆಟ್ಟಿದ್ದು ಹೊಂಡ ಗುಂಡಿಗಳಿಂದ ಆವೃತವಾಗಿದೆ. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪಟ್ಟಣ ಹಾಗೂ ಲಾಯಿಲ ಬಿಜೆಪಿ ಕಾರ್ಯಕರ್ತರು ಜಲ್ಲಿ ಹಾಗೂ ಸಿಮೆಂಟ್ ಮಿಶ್ರಿತ ರೆಡಿಮೆಕ್ಸ್ ಬಳಸಿ ತೇಪೆ ಕಾರ್ಯಕ್ಕೆ ಮುಂದಾದರು.
ಹೆದ್ದಾರಿ ಇಲಾಖೆಯಿಂದ ಯಾವುದೇ ನಿರ್ವಹಣೆ ತೋರದ ಹಿನ್ನೆಲೆ ಯುವಕರೇ ರಾತ್ರಿ ಹೊತ್ತು ಸುಮಾರು 5 ರಿಂದ 6 ಲೋಡ್ ಸಿಮೆಂಟ್ ಬಳಸಿ ತೇಪೆ ಕಾರ್ಯ ನಡೆಸಿದರು. ನಿದ್ರೆಯಲ್ಲಿರುವ ಇಲಾಖೆ ಇನ್ನಾದರೂ ಎಚ್ಚೆತ್ತು ಕೊಳ್ಳಬೇಕಿದೆ.