News Karnataka Kannada
Friday, May 03 2024
ಮಂಗಳೂರು

ಬೆಳಾಲು: ಕೊಯ್ಯೂರು ಅರಣ್ಯದ ಪೆರಿಯಡ್ಕ ಪ್ರದೇಶದಲ್ಲಿ ಬೆಂಕಿ

Belalu: Fire breaks out in Koyyur forest
Photo Credit : News Kannada

ಬೆಳಾಲು:  ಕೊಯ್ಯೂರು ಅರಣ್ಯದ ಪೆರಿಯಡ್ಕ ಪ್ರದೇಶದಲ್ಲಿ ಭಾನುವಾರ ಬೆಂಕಿ ಪ್ರಕರಣ ಉಂಟಾಗಿದ್ದು ಸುಮಾರು ಎರಡು ಎಕರೆ ಪ್ರದೇಶದ ವನ್ಯ ಸಂಪತ್ತಿಗೆ ಹಾನಿ ಉಂಟಾಗಿದೆ.

ಅರಣ್ಯ ಇಲಾಖೆಯ ಉಪ್ಪಿನಂಗಡಿ ವಲಯದ ಕಣಿಯೂರು ಉಪವಲಯ ವ್ಯಾಪ್ತಿಯ ಈ ಕಾಡಿನಲ್ಲಿ ಯಾವ ಕಾರಣದಿಂದ ಬೆಂಕಿ ಉಂಟಾಗಿದೆ ಎಂದು ತಿಳಿದುಬಂದಿಲ್ಲ.

ಡಿ ಆರ್ ಎಫ್ ಒ ಲೋಕೇಶ್ ,ಗಸ್ತು ಅರಣ್ಯ ಪಾಲಕ ವಿನಯ ಚಂದ್ರ, ಶೌರ್ಯ ವಿಪತ್ತು ತಂಡಗಳ ಸದಸ್ಯರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಬೆಂಕಿಯನ್ನು ಹತೋಟಿಗೆ ತಂದರು.

ಮುಂಡಾಜೆ-ಧರ್ಮಸ್ಥಳ ಅರಣ್ಯದ ಅಲ್ಲಲ್ಲಿ ಬೆಂಕಿ:
ಮುಂಡಾಜೆ-ಧರ್ಮಸ್ಥಳ ಮೀಸಲು ಅರಣ್ಯದ ನೇರ್ತನೆ,ಎಕ್ಕೆಲ, ಕೋಟಿ ಹಿತ್ತಿಲು ಮೊದಲಾದ ಪ್ರದೇಶಗಳಲ್ಲಿ ಅರಣ್ಯದಲ್ಲಿ ಬೆಂಕಿ ಉಂಟಾಗಿದ್ದು ಅದು ಒಂದಿಷ್ಟು ಹತೋಟಿಗೆ ಬರುತ್ತಿದ್ದಂತೆ ಮುಂಡ್ರುಪಾಡಿ, ಫಿಲತಡ್ಕ ಮೊದಲಾದ ಪ್ರದೇಶಗಳಲ್ಲಿ ಬೆಂಕಿ ಹರಡುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಅನೇಕ ಮಂದಿ ಸೇರಿ ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನ ನಡೆಸುತ್ತಿದ್ದಾರೆ.ಬೆಂಕಿ ಒಂದೆಡೆ ಹತೋಟಿಗೆ ಬರುತ್ತಿದ್ದಂತೆ ಇನ್ನೊಂದೆಡೆಯಿಂದ ಆವರಿಸುತ್ತಿದೆ. ಭಾರಿ ಬಿಸಿಲಿನ ವಾತಾವರಣ ಕಾರ್ಯಾಚರಣೆಗೆ ಅಡ್ಡಿ ನೀಡುತ್ತಿದೆ.

ಬೆಂಕಿಗೆ ಕಾರಣ:
ಕಾಡಿನಿಂದ ಕಟ್ಟಿಗೆ, ತರಗೆಲೆ ಇತ್ಯಾದಿ ಸಂಗ್ರಹಿಸಲು ಹೋಗುವ ಮಂದಿ ಒಣ ಹುಲ್ಲಿಗೆ ಬೆಂಕಿ ಹಚ್ಚುವುದರಿಂದ ಬೆಂಕಿ ಪ್ರಕರಣಗಳು ಉಂಟಾಗುತ್ತಿವೆ ಎಂಬ ಕೆ ವ್ಯಕ್ತವಾಗಿದೆ. ಕಾಡುಪ್ರಾಣಿಗಳನ್ನು ಓಡಿಸಲು ಅರಣ್ಯ ಪ್ರದೇಶಗಳಿಗೆ ಬೆಂಕಿ ಹಚ್ಚುವವರು ಇದ್ದಾರೆ. ಇದೀಗ ಕಾಡು ಜೇನು ಸಂಗ್ರಹದ ಸಮಯವಾಗಿದ್ದು ಜೇನು ನೊಣಗಳನ್ನು ಓಡಿಸಲು ಹೊಗೆ ಹಾಕಿ ಬಳಿಕ ಬೆಂಕಿಯನ್ನು ಆರಿಸದೆ ವಾಪಸ್ ಆಗುವವರು ಇದ್ದಾರೆ ಇವರೆಲ್ಲರ ಜತೆ ಕಿಡಿಗೇಡಿಗಳು ಕೆಲವೊಂದು ಪ್ರಕರಣಗಳಿಗೆ ಕಾರಣವಾಗುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು