ಬಂಟ್ವಾಳ: ರಾಜ್ಯ ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಮೂಲಭೂತ ಸೌಕರ್ಯಗಳ ಜೊತೆ ಎಲ್ಲಾ ಸಮಸ್ಯೆ ಗಳ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ನೆಡಸಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಮಾ.2 ರಂದು 2.50 ಕೋಟಿಗಿಂತಲೂ ಅಧಿಕ ಅನುದಾನಗಳ ಮೂಲಕ ನಡೆದ ಸಿದ್ದಕಟ್ಟೆ ಕಾಲೇಜಿನ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟನೆ ನಡೆಸಿ ಮಾತನಾಡಿದರು.
ಹಳೆವಿದ್ಯಾರ್ಥಿಗಳು ಹಾಗೂ ಪ್ರಸ್ತುತ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ ಅತ್ಯಂತ ಸಂತಸದ ವಿಚಾರ ಅದಕ್ಕೆ ಅಭಿನಂದನೆಗಳು. ಇಂತಹ ಕಾರ್ಯಗಳು ಕಾಲೇಜಿನ ದಿನಗಳಲ್ಲಿ ನಡೆದಾಗ ಬದಲಾವಣೆ ಸಾಧ್ಯ ಎಂದು ಅವರು ತಿಳಿಸಿದರು.
ಹಳೆ ವಿದ್ಯಾರ್ಥಿಗಳು ಅಂಗಳಕ್ಕೆ ಇಂಟರ್ ಲಾಕ್ ನೀಡಿದರೆ ವಿದ್ಯಾರ್ಥಿಗಳು ಇಂಟರ್ ಲಾಕ್ ಅಳವಡಿಕೆ ಕಾರ್ಯ ಮಾಡಿದ್ದಾರೆ, ನಿಜಕ್ಕೂ ಅಭಿನಂದನೆಯ ಕಾರ್ಯ ಮಾಡಿದ್ದಾರೆ ಎಂದರು.
ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ, ಉಪಾಧ್ಯಕ್ಷೆ ವಿಮಲಾ ಮೋಹನ್ ಪ್ರಮುಖರಾದ ಸಂದೇಶ್ ಶೆಟ್ಟಿ, ರತ್ನಕುಮಾರ್ ಚೌಟ, ವಿನೊದ್ ಅಡಪ, ಗುಣಪಾಲ್ ಶೆಟ್ಟಿ, ಪ್ರಭಾಕರ್ ಪ್ರಭು, ಕವಿತಾ ಶೆಟ್ಟಿ ಗಾರ್, ಚಂದ್ರ ಕೊರಿಯಾರ್ ಮತ್ತಿತರರು ಉಪಸ್ಥಿತರಿದ್ದರು.