ಬಂಟ್ವಾಳ: ಮಾಣಿ ಗ್ರಾಮದ ರಮಾ ಅಶೋಕ್ ಪೂಜಾರಿ ಅವರಿಗೆ ನೂತನವಾಗಿ ಮನೆ ನಿರ್ಮಿಸಿಕೊಡುವುದಾಗಿ ಶಾಸಕ ರಾಜೇಶ್ ನಾಯ್ಕ್ ಭರವಸೆಯನ್ನು ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ರಮಾ ಆಶೋಕ್ ಪೂಜಾರಿ ಅವರ ಮನೆಗೆ ಇತ್ತೀಚಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಬೆಂಕಿಗಾಹುತಿಯಾಗಿತ್ತು. ಘಟನಾ ಸ್ಥಳಕ್ಕೆ ಫೆ.24 ರಂದು ಶುಕ್ರವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅವರು ಭೇಟಿ ನೀಡಿ ಸಂಪೂರ್ಣ ಮನೆ ನಿರ್ಮಾಣದ ಭರವಸೆ ನೀಡಿದ್ದಾರೆ.
ಆರ್ಥಿಕ ವಾಗಿ ಬಡವರಾಗಿರುವ ಈ ಕುಟುಂಬಕ್ಕೆ ಶಾಸಕರು ಮನೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದಾರೆ, ಸ್ಥಳೀಯ ಬಿಜೆಪಿ ಪ್ರಮುಖ ರು ಮನೆ ನಿರ್ಮಾಣದ ಜವಾಬ್ದಾರಿವಹಿಸಿಕೊಳ್ಳುವಂತೆ ಅವರು ತಿಳಿಸಿದರು. ನಾರಾಯಣ ಶೆಟ್ಟಿ ತೋಟ, ರಾಧಾಕೃಷ್ಣ ಅಡ್ಯಂತಾಯ, ಗಣೇಶ್ ರೈ ಮಾಣಿ, ಹರೀಶ್ ಕುಲಾಲ್ ಮಾಣಿ ಮತ್ತಿತರರು ಈ ವೇಳೆ ಹಾಜರಿದ್ದರು.