News Karnataka Kannada
Sunday, April 28 2024
ಮಂಗಳೂರು

ಬಂಟ್ವಾಳ: ಮಾವಿನಕಟ್ಟೆ ನಿವಾಸಿ ಟಿ.ನರಸಿಂಹ ಪೈ ನಾಪತ್ತೆ

Bantwal: T Narasimha Pai, a resident of Manikatte, has gone missing.
Photo Credit : By Author

ಬಂಟ್ವಾಳ: ತಾಲೂಕಿನ ಕುಕ್ಕಿಪಾಡಿ ಗ್ರಾಮದ ಮಾವಿನಕಟ್ಟೆ ನಿವಾಸಿ ಟಿ.ನರಸಿಂಹ ಪೈ (೩೮)ಅವರು ಆ.೨೧ರಂದು ಮನೆ ಬಿಟ್ಟು ಹೋದವರು ಮರಳಿ ಬಾರದೆ ನಾಪತ್ತೆಯಾಗಿರುವುದಾಗಿ ಅವರ ಪತ್ನಿ ಪುಂಜಾಲಕಟ್ಟೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಟಿ. ನರಸಿಂಹ ಪೈ ಅವರು ತಮಿಳುನಾಡಿನಿಂದ ಹಪ್ಪಳ ತಂದು ಮಾವಿನಕಟ್ಟೆ ಎಂಬಲ್ಲಿ ಪ್ಯಾಕಿಂಗ್ ಮಾಡಿ ಅಂಗಡಿಗಳಿಗೆ ಲೈನ್ ಸೇಲ್ ಮಾಡುವ ಕೆಲಸ ಮಾಡಿಕೊಂಡಿದ್ದು, ಕಳೆದ ಕೊರೆನಾ ಸಮಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಈ ಬಗ್ಗೆ ಹಾಸನ ಬ್ಯಾಂಕ್‌ನಲ್ಲಿ ಮಾತುಕತೆ ನಡೆಸಿ, ಸಂಬಂಧಿಕರ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಪತ್ನಿಯನ್ನು ತಾಯಿ ಮನೆಗೆ ಬಿಟ್ಟು ಆ.೨೧ರಂದು ತೆರಳಿದವರು ಬಳಿಕ ಅವರ ಮೊಬಲ್ ಸ್ವಿಚ್ ಆಫ್ ಆಗಿದ್ದು, ಇದುವರೆಗೆ ಅವರು ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಟಿ.ನರಸಿಂಹ ಅವರು ಸುಮಾರು ೬ ಅಡಿ ಎತ್ತರ, ದಪ್ಪ ಶರೀರ, ಬಿಳಿ ಮೈಬಣ್ಣ, ಗಡ್ಡ, ಮೀಸೆ ಹಾಗೂ ತಲೆ ಕೂದಲು ಬಿಟ್ಟಿದ್ದು, ಬಿಳಿ ಬಣ್ಣದ ಪಂಚೆ, ಪಿಸ್ತಾ ಕಲರ್‌ನ ಶರ್ಟ್, ಕನ್ನಡಕ ಧರಿಸಿದ್ದಾರೆ. ಕನ್ನಡ, ಕೊಂಕಣಿ, ಹಿಂದಿ, ತುಳು, ತಮಿಳು ಭಾಷೆ ತಿಳಿದಿದ್ದಾರೆ. ಇವರ ಇರುವಿಕೆಯ ಬಗ್ಗೆ ಕಂಡು ಬಂದರೆ ಪುಂಜಾಲಕಟ್ಟೆ ಪೊಲೀಸ್ ಠಾಣೆ (೮೨೭೭೯೮೬೪೧೧)ಅಥವಾ ದ.ಕ.ಜಿಲ್ಲಾ ಕಂಟ್ರೋಲ್ ರೂಂ (೦೮೨೪-೨೨೨೦೫೦೦)ಗೆ ಸಂಪರ್ಕಿಸಲು ಕೋರಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು