ಬಂಟ್ವಾಳ : ಹಿರಿಯರು ತನಗೆ ವಯಸ್ಸಾಯಿತು ಎಂದು ತಿಳಿಯದೆ, ಸದಾ ಚಟುವಟಿಕೆಯಿಂದ ಇರುವ ವ್ಯಕ್ತಿ ವಯಸ್ಸಿನ ಬಾಧೆಗೆ ಒಳಗಾಗದೆ ಆರೋಗ್ಯವಂತನಾಗಿರುತ್ತಾನೆ. ಪ್ರತಿಯೊಬ್ಬ ನಿವೃತ್ತರು ತಮ್ಮನ್ನು ವಿವಿಧ ಪ್ರವೃತ್ತಿಗಳಲ್ಲಿ ತೊಡಗಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಲಯನ್ ಲೋಕಾನಾಥ ಶೆಟ್ಟಿ ಹೇಳಿದರು.
ಅವರು ಬಿ.ಸಿ.ರೋಡ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಪಿಂಚಣಿದಾರರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೆಂಕಟರಮಣ ಪ್ರಥಮ ದರ್ಜೆ ಪದವಿಕಾಲೇಜು ನಿವೃತ್ತ ಪ್ರಾಂಶುಪಾಲ ಡಾ.ಪಾಂಡುರಂಗ ನಾಯಕ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿ ಬೆಳ್ತಂಗಡಿ ತಾಲೂಕಿನ ಪಿಂಚಣಿದಾರರ ಸಂಘದ ಅಧ್ಯಕ್ಷ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ೭೫ವರ್ಷ ದಾಟಿದ ಹಿರಿಯ ಪಿಂಚಣಿದಾರರಾದ ರಾಮಣ್ಣ ಆಳ್ವ ,ರಾಘವನ್ ನಾಯರ್, ಬಿ.ಆರ್.ಸೀತಾಲಕ್ಷ್ಮಿ, ವೆಂಕಟ್ರಾಯ ಕಾಮತ್, ಕೆ.ಸೀತಾರಾಮ್ ಭಟ್, ಜನ್ನ ಮಂಗಳೂರು, ಎಂ.ಮಹಮ್ಮದ್,ಮೀನಾಕ್ಷಿ, ಲಕ್ಷ್ಮಣ ಮೂಲ್ಯ ಹಾಗೂ ಪಿ.ಕೆ.ಸೀತಾರಾಮರವರನ್ನು ಸನ್ಮಾನಿಸಲಾಯಿತು. ಬಿ.ರಾಮಚಂದ್ರ ರಾವ್, ಜಯಂತ್ ಶೆಟ್ಟಿ, ಟಿ.ಶೇಸಪ್ಪ ಮೂಲ್ಯ , ರಾಧಕೃಷ್ಣ ಶರ್ಮ ಸನ್ಮಾನಿತರ ಕುರಿತು ಅಭಿನಂದಿಸಿ ಮಾತನಾಡಿದರು. ೨೦೨೨ ಜನವರಿರಿಯಿಂದ ನಿಧನರಾದ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜೆ.ಸಿ.ಐ ಯಿಂದ ಸಮಾಜರತ್ನ ಪ್ರಶಸ್ತಿ ಪಡೆದ ಜಲಜಾಕ್ಷಿ ಕುಲಾಲ್ ರವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಮಧುಕರ್ ಮಲ್ಯ ಸ್ವಾಗತಿಸಿದರು. ಕಾರ್ಯದರ್ಶಿ ನೀಲೋಜಿ ರಾವ್ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸದಸ್ಯ ಜಯರಾಮ ಪೂಜಾರಿ ವಂದಿಸಿ ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.